ವಿಟ್ಲ: ಇಡ್ಕಿದು ಗ್ರಾಮದ ನೇರ್ಲಾಜೆ ನಿವಾಸಿ ದಿವಾಕರ ದಾಸ್ ನೇರ್ಲಾಜೆರವರ ಮಾಲಕತ್ವದ ರಾಜ್ಯದ ಪ್ರತಿಷ್ಠಿತ ಪುಸ್ತಕ ವಿತರಕ ಕಂಪೆನಿಯಾಗಿರುವ ಮೈಸೂರಿನ ಎಸ್.ಎಲ್.ವಿ. ಬುಕ್ಸ್ ಇಂಡಿಯಾ ಪ್ರೈವೇಟ್ ಲಿ.ನ ಮಂಗಳೂರಿನ ಬಿಜೈಯಲ್ಲಿರುವ ಶಾಖೆಗೆ ಬಹುಭಾಷ ನಟ ಸುಮನ್ ತಲ್ವಾರ್ ರವರು ಭೇಟಿ ನೀಡಿದರು.
ಬಹುಭಾಷಾ ನಟರಾಗಿರುವ ಸುಮನ್ ತಲ್ವಾರ್ ರವರು ಸುಮಾರು ನೂರಕ್ಕೂ ಅಧಿಕ ಚಲನಚಿತ್ರಗಳಲ್ಲಿ ನಾಯಕ ನಟರಾಗಿ ಅಭಿನಯಿ ಜನಪ್ರೀಯತೆಯನ್ನು ಪಡೆದಿದ್ದಾರೆ. ಮೂಲತ: ಮಂಗಳೂರಿನವರಾಗಿರುವ ಸುಮನ್ ತಲ್ವಾರ್ ರವರು ಪ್ರಸ್ತುತ ಹೈದರಾಬಾದ್ ನಲ್ಲಿ ನೆಲೆಸಿದ್ದು, ಪ್ರಸಿದ್ಧ ಕರಾಟೆ ಪಟುವಾಗಿದ್ದಾರೆ. ಭಾರತೀಯ ಸೈನ್ಯಕ್ಕೆ ನೂರಾರು ಎಕರೆ ಜಾಗವನ್ನು ದಾನ ಮಾಡಿ ಹಿರಿಮೆಯೂ ಇವರಿಗಿದೆ.
ಕನ್ನಡ ಚಲನಚಿತ್ರವೊಂದರಲ್ಲಿ ಶೂಟಿಂಗ್ ಗಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿರುವ ಸುಮನ್ ತಲ್ವಾರ್ ರವರು ಮಂಗಳೂರಿನ ಬಿಜೈನಲ್ಲಿರುವ ಎಸ್.ಎಲ್.ವಿ. ಬುಕ್ ಹೌಸ್ ಗೆ ಭೇಟಿ ನೀಡಿ ಸಂಸ್ಥೆಯ ಬಗ್ಗೆ ಮಾಹಿತಿ ಪಡೆದು ಶುಭಹಾರೈಸಿದರು. ಸಂಸ್ಥೆಯ ವತಿಯಿಂದ ಅವರನ್ನು ಹೂಗುಚ್ಚ ನೀಡಿ ಸ್ವಾಗತಿಸಲಾಯಿತು. ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯಸಂಚಾಲಕ ರಾಮದಾಸ್ ಶೆಟ್ಟಿ ವಿಟ್ಲ,
ಗುಣಪಾಲ್ ದಾಸ್ ನೇರ್ಲಾಜೆ ಹಾಗೂ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.