Friday, May 10, 2024
spot_imgspot_img
spot_imgspot_img

ಪಡುಬಿದ್ರಿ: ಗಂಡನಿಂದ ಮಾನಸಿಕ ಕಿರುಕುಳ; ಮಹಿಳೆ ಆತ್ಮಹತ್ಯೆ

- Advertisement -G L Acharya panikkar
- Advertisement -
vtv vitla

ಪಡುಬಿದ್ರಿ: ಎರಡು ಮಕ್ಕಳ ತಾಯಿಯೊಬ್ಬಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಡುಬಿದ್ರಿ ಕೆಳಗಿನ ಪೇಟೆ ಬಳಿ ನಡೆದಿದೆ.

ಪಡುಬಿದ್ರಿ ಕೆಳಗಿನ ಪೇಟೆ ಬಳಿ ನಿವಾಸಿ ಚೇತನ್ ಎಂಬವರ ಪತ್ನಿ ಮಮತ(43) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.

ಕಳೆದ ಸುಮಾರು ಹನ್ನೆರಡು ವರ್ಷಗಳ ಹಿಂದೆ ಮದುವೆಯಾಗಿದ್ದು ಇವರು ಇಬ್ಬರು ಸೇರಿ ಹೋಟೆಲ್ ಉದ್ಯಮ ನಡೆಸುತ್ತಿದ್ದರು. ಫೆ. 23ರಂದು ಮುಂಜಾನೆ ಅಣ್ಣನಿಗೆ ಕರೆ ಮಾಡಿದ ಮಮತ ಕೂಗುತ್ತಾ ನಾನು ಹಣ ಕದ್ದಿದ್ದೇನೆ ಎಂಬುದಾಗಿ ಗಂಡ ಚೇತನ್ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದಿದ್ದು, ಅದಲ್ಲದೆ ಆರೋಪಿ ಗಂಡ ಹೆಂಡತಿಯ ತಾಯಿಗೆ ಹಾಗೂ ಅಕ್ಕನಿಗೆ ಕರೆ ಮಾಡಿ ನಿಮ್ಮ ಮಗಳು ನನ್ನ ಹಣ ಕದ್ದಿದ್ದಾಳೆ ಅವಳನ್ನು ಇಲ್ಲಿಂದ ಕಳೆದುಕೊಂಡು ಹೋಗಿ ಇಲ್ಲವಾದರೆ ಆಕೆ ನನ್ನ ಕೈಯಲ್ಲಿ ಸಾಯುತ್ತಾಳೆ ಎಂಬುದಾಗಿ ದೂರುವಾಣಿ ಮೂಲಕ ತಿಳಿಸಿದ್ದಾನೆ ಎಂಬುದಾಗಿ ಆರೋಪಿಸಲಾಗಿದೆ. ಈ ಹಿಂದೆಯೂ ಹಣಕ್ಕಾಗಿ ಪೀಡಿಸುತ್ತಿದ್ದ ಎನ್ನಲಾಗಿದೆ.

ಇದರಿಂದಾಗಿ ನನ್ನ ತಂಗಿಯ ಸಾವಿನಲ್ಲಿ ಸಂಶಯವಿದ್ದು ದೈಹಿಕ ಹಾಗೂ ಮಾನಸಿಕ ಕಿರುಕುಳದಿಂದಲೇ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದಾಗಿ ಮೃತಳ ಸಹೋದರ ನೀಡಿದ ದೂರಿನಂತೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!