Friday, April 19, 2024
spot_imgspot_img
spot_imgspot_img

ಪಾಟ್ರಕೋಡಿ: ಪ್ರಾಥಮಿಕ ಶಾಲಾ ಅಭಿವೃದ್ದಿ ಸಮಿತಿಯ ಆಯ್ಕೆ ಪ್ರಕ್ರಿಯೆ!

- Advertisement -G L Acharya panikkar
- Advertisement -

ಪಾಟ್ರಕೋಡಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಟ್ರಕೊಡಿಯ ವಿದ್ಯಾರ್ಥಿಗಳ ಹೆತ್ತವರ ಸಭೆಯು ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಜಬ್ಬರ್ ರವರ ನೇತೃತ್ವದಲ್ಲಿ ಜರಗಿತು.

ಕೆದಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯಂತಿ ಧನಂಜಯ ಶೆಟ್ಟಿ, ಉಪಾಧ್ಯಕ್ಷರಾದ ಉಮೇಶ್ ಮುರುವ, ಸದಸ್ಯರಾದ ಹಬೀಬ್ ಮುಹ್ಸಿನ್ ಎಂ. ಎಚ್. ಹಾಗು ಅಬ್ದುಲ್ ಖಾದರ್ ಪಾಟ್ರಕೊಡಿ, ಮಾಜಿ ಅದ್ಯಕ್ಷರಾದ ಶರೀಪ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು.

ನೂತನ ಅದ್ಯಕ್ಷರಾಗಿ ಅಶ್ರಪ್ ತಾರಿಪಡ್ಪು, ಉಪಾಧ್ಯಕ್ಷರಾಗಿ ಬದ್ರುನ್ನೀಸಾ ಪಾಟ್ರಕೊಡಿ ಸದಸ್ಯರು ಅಬ್ದಲ್ ರಜಾಕ್ ಕೆ. ಪಿ, ಹರೀಶ್ ಕುದ್ದುಂಬ್ಲಾಡಿ, ಅಶ್ರಪ್ ಎಂ., ಶರೀಫ್ ಪಾಟ್ರಕೊಡಿ, ಅಮೀನಾ, ಅಸ್ಯಮ್ಮ, ರಫೀಕ್ ಮದನಿ, ಕಾವೇರಿ, ಮುಸ್ತಫಾ, ಸರಸ್ವತಿ, ಕೈರುನ್ನಿಸಾ, ಜೊಹರಾ, ಅಯೀಷಾರವರನ್ನು ಆರಿಸಲಾಯಿತು. ಶಾಲೆಯ ಮುಖ್ಯ ಗುರುಗಳಾದ ಶರಣಪ್ಪರವರು ಸ್ವಾಗತಿಸಿ, ಕೊನೆಯಲ್ಲಿ ಧನ್ಯವಾದವನ್ನು ಅರ್ಪಿಸಿದರೆ ಗುರುಗಳಾದ ಮುಬಾರಕ್ ಸರ್ ಕಾರ್ಯಕ್ರಮವನ್ನು ನಿರೂಪಿಸಿದರು

- Advertisement -

Related news

error: Content is protected !!