- Advertisement -
- Advertisement -
ಮಹಾರಾಷ್ಟ್ರ: ಪಾನಿಪುರಿ ವಿಷಯವಾಗಿ ಮಹಿಳೆಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ನಡೆದಿದೆ. ಮೃತ ಮಹಿಳೆ ಪ್ರತಿಕ್ಷಾ ಸರ್ವಾಡೆ (23) ಎನ್ನಲಾಗಿದೆ.
2019 ರಲ್ಲಿ ಗಹಿನಿನಾಥ್ ಸರ್ವಾಡೆ ಜೊತೆ ಪ್ರತಿಕ್ಷಾ ಸರ್ವಾಡೆ ವಿವಾಹವಾಗಿದ್ದರು. ಇಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಜಗಳ ನಡೆದ ದಿನದಂದು ಈಕೆಗೆ ತಿಳಿಸದೆ ಪತಿ ಪಾನಿಪುರಿ ಪಾರ್ಸೆಲ್ ತಂದಿದ್ದ. ಮನೆಯಲ್ಲಿ ಅಡುಗೆ ಮಾಡಿದ್ದರೂ ಕೂಡ ಗಂಡ ತನಗೆ ಒಂದೂ ಮಾತು ಹೇಳದೆ ಪಾನಿ ಪುರಿ ತಂದಿದ್ದಕ್ಕೆ ಪ್ರತಿಕ್ಷಾ ಕೋಪಗೊಂಡು ಜಗಳ ಶುರುವಿಟ್ಟುಕೊಂಡಳು.
ಅದೇ ಕಾರಣಕ್ಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವನ್ನಪ್ಪಿದ್ದಾಳೆ. ಆಕೆಗೆ 18 ತಿಂಗಳ ಮಗು ಇತ್ತು. ಮಹಿಳೆ ಆತ್ಮಹತ್ಯೆಗೆ ಆಕೆ ಪತಿ ಕಾರಣವೆಂದು ತಂದೆ ಆರೋಪ ಮಾಡಿದ್ದಾರೆ. ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಿದ ಪೊಲೀಸರು ಪಾನಿ ಪುರಿ ಆತ್ಮಹತ್ಯೆಗೆ ಕಾರಣ ಎಂದಿದ್ದಾರೆ.
- Advertisement -