ಪುತ್ತೂರು: ಕಂಬಳ ವೀಕ್ಷಣೆಗೆ ಬಂದಿದ್ದ ಮಂಗಳೂರಿನ ಯುವಕ ತನ್ನ ಪ್ರೇಯಸಿಯ ಜೊತೆ ಕಂಬಳ ಗದ್ದೆಯಲ್ಲಿ ಮಾತನಾಡುತ್ತಿದ್ದ ವೇಳೆ ಅಲ್ಲಿಗೆ ಬಂದ ಯುವತಿಯ ಮಾಜಿ ಪ್ರಿಯಕರ ಹಾಗೂ ಆತನ ಸ್ನೇಹಿತರು ಮಂಗಳೂರಿನ ಯುವಕನಿಗೆ ಬೆದರಿಸಿ, ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಪುತ್ತೂರು ಠಾಣೆಯಲ್ಲಿ ದೂರು ನೀಡಿದ್ದಾರೆ.
ಮಂಗಳೂರಿನ ಯುವಕನನ್ನು ಮಂಗಳೂರಿನ ಕೋಡಿಕಲ್ ರಸ್ತೆ ಬಾಪೂಜಿ ನಗರದ ಸಾಗರ್ (23) ಮತ್ತು ಆತನ ಸ್ನೇಹಿತ ದುರ್ಗಾಪ್ರಸಾದ್ ಹಲ್ಲೆಗೊಳಗಾದವರು.ಕೌಶಿಕ್, ಯಜ್ಞೇಶ್, ಕೇಶವ, ಸೃಜನ್, ವಿನೀತ್, ಲತೇಶ್, ಮನ್ವಿತ್, ಮೋಹಿತ್ ಮತ್ತು ಹೇಮಂತ್ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
ಘಟನೆ ವಿವರ;
ಜ. 29ರಂದು ಮಧ್ಯಾಹ್ನ ಸಾಗರ್ ಎಂಬಾತ ಪುತ್ತೂರಿನ ಕಂಬಳ ಗದ್ದೆಯಲ್ಲಿ ತನ್ನ ಪ್ರೇಯಸಿ ಜೊತೆ ಮಾತನಾಡುತ್ತಿರುವಾಗ ಅಲ್ಲಿಗೆ ಬಂದ ಯುವತಿಯ ಮಾಜಿ ಪ್ರಿಯಕರ ಕೌಶಿಕ್ “ನೀನು ಯಾರು? ಎಲ್ಲಿಯವಾ? ನಿನಗೂ ಆಕೆಗೂ ಏನು ಸಂಬಂಧ? ಎಂದು ಕೇಳಿ, ಸಾಗರ್ ಮತ್ತು ಆತನ ಸ್ನೇಹಿತ ದುರ್ಗಾಪ್ರಸಾದ್ನನ್ನು ಬಲ್ನಾಡ್ ಎಂಬಲ್ಲಿನ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕೌಶಿಕ್ ಆತನ ಸ್ನೇಹಿತನ ಸೇರಿಕೊಂಡು ಹಲ್ಲೆ ನಡೆಸಿ ಇನ್ನು ಮುಂದೆ ಆಕೆಯ ಸುದ್ದಿಗೆ ಬಂದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆರದಿಕೆಯೊಡ್ಡಿ ಆರೋಪಿಗಳು ಸ್ಥಳದಿಂದ ತೆರಳಿದ್ದಾರೆ.
ಸದ್ಯ ಕೌಶಿಕ್ ಮತ್ತು ಆತನ ಸ್ನೇಹಿತರ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಸಾಗರ್ ಪ್ರಕರಣ ದಾಖಲಿಸಿದ್ದಾರೆ.