Tuesday, March 19, 2024
spot_imgspot_img
spot_imgspot_img

ಪುತ್ತೂರು: ಕನ್ಹಯ್ಯಾ ಲಾಲ್ ಹತ್ಯೆ ಖಂಡಿಸಿ ವಿ.ಹಿಂ.ಪ ಮತ್ತು ಬಜರಂಗದಳ ಪ್ರತಿಭಟನೆ

- Advertisement -G L Acharya panikkar
- Advertisement -

ಪುತ್ತೂರು: ಟೈಲರ್ ಕನ್ನಯ್ಯಾ ಲಾಲ್ ರವರ ಹತ್ಯೆ ಯನ್ನು ಖಂಡಿಸಿ ವಿಶ್ವಹಿಂದೂ ಪರಿಷದ್ ಮತ್ತು ಬಜರಂಗದಳದಿಂದ ಪುತ್ತೂರು ತಾಲೂಕು ಆಡಳಿತ ಸೌಧ ಬಳಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ, ವಿಶ್ವಹಿಂದೂ ಪರಿಷದ್ ವಿಭಾಗ ಪ್ರಮುಖ್ ಮುರಳಿಕೃಷ್ಣ ಹಸಂತಡ್ಕ ರಾಷ್ಟ್ರದ್ರೋಹ, ಧರ್ಮದ್ರೋಹ ಮಾಡಿದವರಿಗೆ ಈ ದೇಶದಲ್ಲಿ ಜಾಗವಿಲ್ಲ. ಅಲ್ಪಸಂಖ್ಯಾತರ ತುಷ್ಟಿಕರಣ ರೀತಿಯಿಂದಾಗಿ ಬಹುಸಂಖ್ಯಾತರ ಮೇಲೆ ಕೇಸುಗಳಾಗುತ್ತಿವೆ. ರಾಷ್ಟ್ರೀಯ ಪರ ಕೆಲಸ ಮಾಡಿದವರಿಗೆ ನಮ್ಮ ಬೆಂಬಲವಿದೆ. ಆದರೆ ಭಯೋತ್ಪಾದನೆ ಮಾಡುವವರಿಗೆ ಈ ದೇಶದಲ್ಲಿ ಉಳಿಗಾಲವಿಲ್ಲ. ಎಂದ ಅವರು ಶಸ್ತ್ರ ಮತ್ತು ಶಾಸ್ತ್ರವನ್ನು ಯಾವ ರೀತಿ ಆಚರಿಸಬೇಕೆಂದು ಜಗತ್ತಿಗೆ ತೋರಿಸಿಕೊಟ್ಟ ಈ ದೇಶಕ್ಕೆ ಶಸ್ತ್ರ ಹಿಡಿಯಲು ಗೊತ್ತಿದೆ ಎಂದು ಹೇಳಿದರು.

ಈ ಪುಣ್ಯ ಭೂಮಿಯಲ್ಲಿ ಯಾವ ದುಷ್ಟತನಕ್ಕೆ, ರಾಕ್ಷಸಿತನಕ್ಕೆ ಬೆಂಕಿ ಹಾಕಬೇಕೋ ಆಗ ಬೆಂಕಿ ಹಾಕಲಿದ್ದೇವೆ. ನಮಗೂ ಬೆಂಕಿ ಹಾಕಲು ಗೊತ್ತಿದೆ. ರಾಷ್ಟ್ರೀಯತೆಯನ್ನು ಒಪ್ಪಿಕೊಂಡವರು ಮಾತ್ರ ಈ ರಾಷ್ಟ್ರದಲ್ಲಿ ಇರಲಿ. ಭಾರತ ನಾಶ ಪಣ ತೊಡುವವರಿಗೆ ಎಚ್ಚರಿಕೆ ನೀಡಲಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ವಿಶ್ವ ಹಿಂದೂ ಪರಿಷದ್ ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ, ಜನಾರ್ಧನ್ ಬೆಟ್ಟ, ಹಿಂದೂ ಜಾಗರಣ ವೇದಿಕೆಯ ಮುಖಂಡ, ಅಜಿತ್ ಹೊಸಮನೆ ಹಾಗೂ ಮತ್ತಿತರ ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -

Related news

error: Content is protected !!