Monday, May 13, 2024
spot_imgspot_img
spot_imgspot_img

ಕಲ್ಲಡ್ಕ: ಬಂಟರ ಸಂಘ ಕಲ್ಲಡ್ಕ ವಲಯ ಆಶ್ರಯದಲ್ಲಿ “ಬಂಟಾಶ್ರಯ” ಹಸ್ತಾಂತರ, ಗೃಹ ಪ್ರವೇಶೋತ್ಸವ, ಸಭಾ ಕಾರ್ಯಕ್ರಮ

- Advertisement -G L Acharya panikkar
- Advertisement -
vtv vitla

ಕಲ್ಲಡ್ಕ: ಬಂಟರ ಸಂಘ ಕಲ್ಲಡ್ಕ ವಲಯ ಇದರ ವತಿಯಿಂದ ಕೊಡುಗೆಯಾಗಿ ನೀಡಿದ ವೀರಕಂಭ ಗ್ರಾಮದ ಪಾತ್ರೆಜಾಲು ಎಂಬಲ್ಲಿನ ಗಣೇಶ್ ರೈ ಎಂಬವರಿಗೆ ನಿರ್ಮಿಸಲಾದ ನೂತನಮನೆ “ಬಂಟಾಶ್ರಯ” ಇದರ ಹಸ್ತಾಂತರ, ಗೃಹ ಪ್ರವೇಶೋತ್ಸವ ಹಾಗೂ ಸಭಾ ಕಾರ್ಯಕ್ರಮ ವೀರಕಂಭ ಗ್ರಾಮದ ಪಾತ್ರೆಜಾಲಿನಲ್ಲಿ ನಡೆಯಿತು.

ಅಜಿತ್ ಕುಮಾರ್ ರೈ ಮಾಲಾಡಿ, ಅಧ್ಯಕ್ಷರು ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಕೆ.ಡಿ ಶೆಟ್ಟಿ ಚೇರ್‌ಮ್ಯಾನ್ ಭವಾನಿ ಶಿಪ್ಪಿಂಗ್ (ಲಿ.) ಮುಂಬೈ ಇವರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ವೀರಕಂಭ ಗ್ರಾಮದ ಪಾತ್ರೆಜಾಲು ನಿವಾಸಿ ಗಣೇಶ್ ರೈ ಎಂಬವರಿಗೆ ನಿರ್ಮಿಸಲಾದ ನೂತನ ಮನೆಯನ್ನು ಅಜಿತ್ ಕುಮಾರ್ ರೈ ಮಾಲಾಡಿ, ಅಧ್ಯಕ್ಷರು ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇವರು ಹಸ್ತಾಂತರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ರಮಾನಾಥ ರೈ, ಮಾಜಿ ಸಚಿವರು ಕರ್ನಾಟಕ ಸರಕಾರ ಇವರು ಬಂಟ ಪಲಾನುಭವಿಗಳಿಗೆ ದಾಖಲೆ ಪತ್ರದ ವಿತರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಶಾಮಿಯಾನ ಮಾಲಕರನ್ನು ಗೌರವಿಸಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಚಂದ್ರಹಾಸ ಡಿ.ಶೆಟ್ಟಿ ಅಧ್ಯಕ್ಷರು ಬಂಟರ ಸಂಘ ಬಂಟ್ವಾಳ ತಾಲೂಕು, ಪ್ರತಿಭಾ ಎ. ರೈ ಜೊತೆ ಕೋಶಾಧಿಕಾರಿ ಬಂಟರ ಸಂಘ ಬಂಟ್ವಾಳ ತಾಲೂಕು, ಸುಜಾತ ಪಿ ರೈ, ಕೋಶಾಧಿಕಾರಿ ಮಹಿಳಾ ವಿಭಾಗ ಬಂಟರ ಸಂಘ ಬಂಟವಾಳ ತಾಲೂಕು (ರಿ), ಜಗನ್ನಾಥ ಚೌಟ ಬದಿಗುಡ್ಡೆ ಕಾರ್ಯದರ್ಶಿ ಬಂಟರ ಸಂಘ ಬಂಟವಾಳ ತಾಲೂಕು (ರಿ), ಎ.ಸಿ ಭಂಡಾರಿ ಮಾಜಿ ಅಧ್ಯಕ್ಷರು ನಂದಾವರ ದೇವಸ್ಥಾನ ಸಮಿತಿ, ಚಂದ್ರಹಾಸ ಅಡಪ್ಪ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಗಂಗಾಧರ ರೈ ಅಧ್ಯಕ್ಷರು ಬಂಟರ ಸಂಘ ಮಾಣಿ ವಲಯ, ದೇವಪ್ಪ ಶೇಖ ಅಧ್ಯಕ್ಷರು ಸಾಲೆತ್ತೂರು ವಲಯ, ಸುದೀಪ್ ಕುಮಾರ್ ಶೆಟ್ಟಿ ಮಾಣಿ, ಅಶ್ವಿನ್ ಕುಮಾರ್ ರೈ ವಕೀಲರು, ಶಂಕರ ಶೆಟ್ಟಿ ಪರಾರಿ ಬಿ ಸಿ ರೋಡ್, ಸುಂದರ ರೈ ಮಾಣಿ ವಲಯ, ಅರವಿಂದ ರೈ, ಬಾಲಕೃಷ್ಣ ಆಳ್ವ, ಭಾಸ್ಕರ ಶೆಟ್ಟಿ ವೀರಕಂಭ, ಅಮರೇಶ್ ಶೆಟ್ಟಿ ಸಾಲೆತ್ತೂರು ಜಾಗತಿಕ ಬಂಟರ ಸಂಘ, ರಾಮಣ್ಣ ಶೆಟ್ಟಿ, ಕೇಶವ ಶೆಟ್ಟಿ ಕೋಡಿ, ಲೋಹಿತಾಶ್ವ ಬಂಗ, ಪ್ರೇಮನಾಥ ಶೆಟ್ಟಿ, ಪ್ರಭಾಕರ ಶೆಟ್ಟಿ, ಮಹೇಶ್ ಶೆಟ್ಟಿ, ನೀನಾ ರೈ ಅಧ್ಯಕ್ಷರು ಮಹಿಳಾ ವಿಭಾಗ ಬಂಟರ ಸಂಘ ಕಲ್ಲಡ್ಕ, ಸುಧಾನ ರೈ, ದಿವಾಕರ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ ಬೆಂಞಣ್ತಿಮಾರ್ ಗುತ್ತು ಉಪಾಧ್ಯಕ್ಷರು ಕಲ್ಲಡ್ಕ ವಲಯ ಬಂಟರ ಸಂಘ, ಜೀವನ್ ಶೆಟ್ಟಿ ಶಿಮ್ಲಾಜೆಗುತ್ತು, ಸಂತೋಷ್ ಶೆಟ್ಟಿ ಸೀನಾಜೆ ಯುವ ಬಂಟರ ಅಧ್ಯಕ್ಷರು ಕಲ್ಲಡ್ಕ ವಲಯ, ಸಂದೀಪ್ ಶೆಟ್ಟಿ ಅರೆಬೆಟ್ಟು ಅಧ್ಯಕ್ಷರು ವೀರಕಂಭ ಗ್ರಾಮ ಪಂಚಾಯತ್, ನಾಗರಾಜ್ ಶೆಟ್ಟಿ, ಮಹೇಶ್ ಕುಮಾರ್ ಶೆಟ್ಟಿ ನೆಟ್ಲ ಅಧ್ಯಕ್ಷರು ಗೋಳ್ತಮಜಲು ಗ್ರಾಮ ಸಮಿತಿ ಬಂಟರ ಸಂಘ, ಅಶೋಕ್ ಆಳ್ವ, ರವಿರಾಜ್ ಆಳ್ವ ವೀರಕಂಭ, ಕೆ. ಪದ್ಮನಾಭ ರೈ ಅಧ್ಯಕ್ಷರು ಬಂಟರ ಸಂಘ ಕಲ್ಲಡ್ಕ ವಲಯ, ಆಶಾ ರೈ ವಕೀಲರು, ಸುನಿತಾ ಶೆಟ್ಟಿ ಮಾರ್ನಬೈಲು ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಾರಿಕ ರೈ ಪ್ರಾರ್ಥಿಸಿ, ಪದ್ಮನಾಭ ರೈ ಅಧ್ಯಕ್ಷರು ವಲಯ ಬಂಟರ ಸಂಘ ಕಲ್ಲಡ್ಕ ಸ್ವಾಗತಿಸಿ ಪ್ರಸ್ತಾವಿಕ ಮಾತುಗಳನ್ನಾಡಿದರು. ನಾಗೇಶ್ ಶೆಟ್ಟಿ ಬೋಂಡಾಲ ಧನ್ಯವಾದಗೈದರು.

- Advertisement -

Related news

error: Content is protected !!