- Advertisement -
- Advertisement -
ಪುತ್ತೂರು: ಕುಂದಾಪುರ ಉಪವಲಯ ಆರಣ್ಯಾಧಿಕಾರಿ ಹಸ್ತಾ ಶೆಟ್ಟಿಯವರು ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೇರ ನೇಮಕಾತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 2ನೇ ರ್ಯಾ0ಕ್ ಪಡೆದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.
ಇವರು ಒಳಮೊಗ್ರು ಗ್ರಾಮದ ಮುಡಾಲ ನಿವಾಸಿ, ಕಟ್ಟಡ ಕಾರ್ಮಿಕರ ಸಂಘದ ಕು0ಬ್ರ ವಲಯ ಅಧ್ಯಕ್ಷ ಪುರ0ದರ ಶೆಟ್ಟಿ ಮುಡಾಲ ಮತ್ತು ವಾರಿಜಾಕ್ಷಿ ಪಿ. ಶೆಟ್ಟಿಯವರ ಪುತ್ರಿಯಾಗಿದ್ದು, ಇವರು, ಬಿಎಸ್ಪಿ ಪದವಿ ಪಡೆದುಕೊಂಡ ಬಳಿಕ ಕಳೆದ 1 ವರ್ಷಗಳಿಂದ ಕುಂದಾಪುರ ವಲಯ ಅರಣ್ಯಾಧಿಕಾರಿ ಕಛೇರಿಯಲ್ಲಿ ಉಪವಲಯ ಅರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
- Advertisement -