Sunday, May 19, 2024
spot_imgspot_img
spot_imgspot_img

ಪುತ್ತೂರು: ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆ ರಿಕ್ರಿಯೇಷನ್ ಸೆಂಟರ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

- Advertisement -G L Acharya panikkar
- Advertisement -

ಪುತ್ತೂರು: ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆ ರಿಕ್ರಿಯೇಷನ್ ಸೆಂಟರ್ ವತಿಯಿಂದ ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಬಹಳ ವಿಜ್ರಂಭಣೆಯಿಂದ 75 ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

ಕ್ಯಾಂಪ್ಕೋ ಕುಟುಂಬದ ಸದಸ್ಯರೆಲ್ಲಾ ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ, ಕ್ಯಾಂಪ್ಕೋ ರಿಕ್ರಿಯೇಷನ್ ಸೆಂಟರಿನ ಅಧ್ಯಕ್ಷರಾದ ಪ್ರಶಾಂತ್ ಭಟ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎ ಗಣೇಶ್, ಕೆ. ಚಂದ್ರಶೇಖರ್ ರಾವ್, ಎನ್ ರಮೇಶ ಗೌಡ, ಅನುಪ್ ಕೆ.ಯು, ಜಾರಪ್ಪ ಬಿ, ನಾರಾಯಣ ಶೇಖ, ಬಿ.ಕೆ ಗೋಪಾಲಕೃಷ್ಣ, ಪಿ. ಗಣೇಶ್ ನಾಯಕ್, ಲಕ್ಷೀ ನಾರಾಯಣ, ಅನಂತ ಪದ್ಮನಾಭ, ಕೆ. ಶಂಕರನಾರಾಯಣ ಭಟ್ಟ, ಶಿವಣ್ಣ ಗೌಡ, ಶಶಿರಾಜ್, ಸುಬ್ರಮಣ್ಯ ಜೋಯಿಸ, ಚಿದಾನಂದ ಎಸ್ ಮತ್ತು ಶಂಕರ ಭಟ್ವ ವಿ, ಉಪಸ್ಥಿತರಿದ್ದರು.

ಮುಖ್ಯ ಅತಿಥಿಗಳು ಧ್ವಜಾರೋಹಣವನ್ನು ನೆರವೇರಿಸಿದರು. ಮುಖ್ಯ ಅತಿಥಿಗಳ ಪರವಾಗಿ ಸುಬ್ರಮಣ್ಯ ಜೋಯಿಸ ಹಿತನುಡಿಗಳನ್ನು ಆಡಿದರು. ರಿಕ್ರಿಯೇಷನ್ ಸೆಂಟರಿನ ಅಧ್ಯಕ್ಷರಾದ ಪ್ರಶಾಂತ್ ಭಟ್ ರವರು ಸ್ವಾತಂತ್ರ್ಯೋತ್ಸವದ ಮಹತ್ವದ ಬಗ್ಗೆ ತಿಳಿಸಿದರು ವಿದಿತಾ ಭಟ್, ವೃಂದ , ಶ್ರಾವ್ಯ ವಂದೇ ಮಾತರಂ ಗೀತೆ ಹಾಡಿದರು. ರಿಕ್ರಿಯೇಷನ್ ಸೆಂಟರಿನ ಕಾರ್ಯದರ್ಶಿ ಸತೀಶ್ ಕುಮಾರ್ ಸ್ವಾಗತ ಭಾಷಣವನ್ನು ಮಾಡಿದರು, ರಿಕ್ರಿಯೇಷನ್ ಸೆಂಟರಿನ ಸದಸ್ಯರಾದ ಪ್ರಶಾಂತ್ ಡಿ. ಎಸ್ ಧನ್ಯವಾದ ಸಮರ್ಪಿಸಿದರು. ರಿಕ್ರಿಯೇಷನ್ ಸೆಂಟರಿನ ಕೋಶಾಧಿಕಾರಿ ರಾಜೇಶ್ ಟಿ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಕಾರ್ಯಕ್ರಮದಲ್ಲಿ ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆ ಎ.ಜಿ.ಎಂ ಲಕ್ಷಣ್ ಡೋಂಗ್ರೆ ಹಾಗೂ ರಿಕ್ರಿಯೇಷನ್ ಸೆಂಟರಿನ ಎಲ್ಲಾ ಕಾರ್ಯಕಾರಿಣಿ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಸಿಹಿ ತಿಂಡಿ ಮತ್ತು ಲಘು ಉಪಹಾರವನ್ನು ನೀಡಲಾಯಿತು.

- Advertisement -

Related news

error: Content is protected !!