ಪುತ್ತೂರು: ಐಎಮ್ ವೈದ್ಯರ ದಿನದ ಪ್ರಶಸ್ತಿ ಪುರಸ್ಕೃತರಾದ ಪುತ್ತೂರಿನ ಡಾ. ಎಂ.ಕೆ. ಪ್ರಸಾದ್ ರವರಿಗೆ ಸತ್ಯಜಿತ್ ಸುರತ್ಕಲ್ ಅಭಿಮಾನಿ ಬಳಗ ಪುತ್ತೂರು ಇದರ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸತ್ಯಜಿತ್ ಸುರತ್ಕಲ್, ರಾಷ್ಟ್ರಭಕ್ತ ನಾಗರಿಕ ವೇದಿಕೆ ಸುರತ್ಕಲ್ ಇದರ ಪ್ರಮುಖರಾದ ಸರ್ಜೇಂಟ್ ಶ್ರೀಕಾಂತ್ ಶೆಟ್ಟಿ ಬಾಳ, ಗುರುಚಂದ್ರ ಹೆಗ್ಡೆ ಕೂಳೂರು, ಅಣ್ಣಪ್ಪ ದೇವಾಡಿಗ ಸುರತ್ಕಲ್, ಹರೀಶ್ ಕಡಂಬಾಡಿ, ಹಾಗೂ ಅಭಿಮಾನಿ ಬಳಗದ ಕಾರ್ಯಕರ್ತ ಉಪಸ್ಥಿತರಿದ್ದರು.
ಸಂಕಷ್ಟದಲ್ಲಿರುವ ನಿವೃತ್ತ ಯೋಧರಿಗೆ ನೆರವಾಗುವುದು ಹಾಗೂ ವಿದ್ಯಾರ್ಥಿಗಳಲ್ಲಿ ಸೈನ್ಯ ಸೇವೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಳೆದ 7 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಮಂಗಳೂರು ಸುರತ್ಕಲ್ನ ರಾಷ್ಟ್ರಭಕ್ತ ನಾಗರಿಕ ವೇದಿಕೆಯ ವತಿಯಿಂದ ಮಾಜಿ ಸೈನಿಕರ ಸಂಘದ ಆಶ್ರಯದಲ್ಲಿ ಮಾಜಿ ಸೈನಿಕರ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎರಡು ಮಂದಿ ನಿವೃತ್ತ ಯೋಧರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಿದರು.
ಎರಡನೇ ಮಹಾಯುದ್ಧದಲ್ಲಿ ಹೋರಾಡಿದ್ದ ಯೋಧ ವಿಟ್ಲ ಚಂದಳಿಕೆ ದಿ.ಮುತ್ತಪ್ಪ ಮೂಲ್ಯಯವರ ಪತ್ನಿ ಸ್ವರ್ಣಲತಾ ಹಾಗೂ ನಿವೃತ್ತ ಹವಾಲ್ದಾರ್ ಕಡಬ ನೂಜಿಬಾಳ್ತಿಲ ಯಹನಾನ್ರವರ ಪತ್ನಿ ಅಣ್ಣಮ್ಮರವರಿಗೆ ತಲಾ 25,000ರೂ.ಗಳ ಆರ್ಥಿಕ ನೆರವಿನ ಚೆಕ್ನ್ನು ವಿತರಿಸಲಾಯಿತು.