- Advertisement -
- Advertisement -
ಪುತ್ತೂರು: ಸಂಪ್ಯದಲ್ಲಿರುವ ಪುತ್ತೂರು ಗ್ರಾಮಾಂತರ ಠಾಣೆ, ಕಡಬ ಮತ್ತು ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರಾಗಿ ಶೃಂಗೇರಿ ಠಾಣೆಯಿಂದ ರವಿ ಬಿ.ಎಸ್ ಆಗಮಿಸಲಿದ್ದಾರೆ. ಇಲ್ಲಿ ಇನ್ಸ್ಪೆಕ್ಟರ್ ಆಗಿದ್ದ ಉಮೇಶ್ ಉಪ್ಪಳಿಕೆ ಅವರನ್ನು ದ.ಕ ಜಿಲ್ಲಾ ಡಿಎಸ್ಬಿ ಗೆ ವರ್ಗಾವಣೆಗೊಳಿಸಲಾಗಿದೆ.
ರವಿ ಬಿ ಎಸ್ ರವರು ಈ ಹಿಂದೆ ಸಂಪ್ಯ ಪೊಲೀಸ್ ಠಾಣೆ ಮತ್ತು ಉಪ್ಪಿನಂಗಡಿ ಪೊಲೀಸ್ ಠಾಣಾ ಎಸ್ ಐ ಆಗಿ ಕರ್ತವ್ಯ ನಿರ್ವಹಿಸಿದ್ದರು. ಆ ಬಳಿಕ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಭಡ್ತಿ ಪಡೆದಿದ್ದರು. ಒಟ್ಟು 64 ವೃತ್ತ ನಿರೀಕ್ಷರನ್ನು ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ.
- Advertisement -