- Advertisement -
- Advertisement -
ಪುತ್ತೂರು: ಫೋಟೋಗ್ರಾಫರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಮೂವರು ಆರೋಪಿಗಳಿಗೆ ಪುತ್ತೂರು ನ್ಯಾಯಾಲಯ ನಮವೆಂಬರ್ 30 ರವರೆಗೆ ಪೋಲಿಸ್ ಕಸ್ಟಡಿ ನೀಡಿದೆ.
ಇನ್ನೋರ್ವ ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನದ ಆದೇಶ ಹೊರಡಿಸಿದೆ. ಮೈಸೂರಿನ ಫೋಟೋಗ್ರಾಫರ್ ಜಗದೀಶ್ ಪುತ್ತೂರಿನ ಕುಂಜೂರುಪಂಜದ ಕೃಷಿಭೂಮಿಯ ವಿಚಾರದಲ್ಲಿ ನವಂಬರ್ 17 ರಂದು ಪುತ್ತೂರಿಗೆ ಬಂದಿದ್ದು, ಆ ಬಳಿಕ ಜಗದೀಶ್ ನಾಪತ್ತೆಯಾಗಿದ್ದರು.
ನಾಪತ್ತೆ ಪ್ರಕರಣದ ತನಿಖೆ ಆರಂಭಿಸಿದ ಪೋಲೀಸರಿಗೆ ಜಗದೀಶ್ ಕೊಲೆ ಸುಳಿವು ದೊರೆತ ಹಿನ್ನಲೆಯಲ್ಲಿ ಜಗದೀಶ್ ಮಾವ. ಬಾಲಕೃಷ್ಣ ರೈ ಯವರನ್ನು ತನಿಖೆಗೆ ಒಳಪಡಿಸಿದ ಸಂದರ್ಭದಲ್ಲಿ ಕೊಲೆಯ ವಿಚಾರವನ್ನು ಬಾಲಕೃಷ್ಣ ರೈ ಪೋಲೀಸರ ಮುಂದೆ ತಿಳಿಸಿದ್ದಾನೆ. ಕೊಲೆಗೆ ಸಹಕರಿಸಿ ಪ್ರಶಾಂತ್ ರೈ, ಜೀವನ್ ಪ್ರಸಾದ್ ಮತ್ತು ಜಯಲಕ್ಷ್ಮಿ ಎನ್ನುವ ಆರೋಪಿಗಳನ್ನೂ ಬಂಧಿಸಿದ್ದಾರೆ. ಪ್ರಮುಖ ಆರೋಪಿಗಳಾದ ಬಾಲಕೃಷ್ಣ ರೈ, ಪ್ರಶಾಂತ್ ರೈ ಮತ್ತು ಜೀವನ್ ಪ್ರಸಾದ್ ಗೆ ಪೋಲೀಸ್ ಕಸ್ಟಡಿ ವಿಧಿಸಲಾಗಿದ್ದು, ಜಯಲಕ್ಷ್ಮಿ ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
- Advertisement -