Thursday, March 28, 2024
spot_imgspot_img
spot_imgspot_img

ಪುತ್ತೂರು: ಶಿವಮಣಿ ಕಲಾ ಸಂಘ (ರಿ) ವಾರ್ಷಿಕೋತ್ಸವ ಹಾಗೂ ಶ್ರೀ ಕೃಷ್ಣ ಜನ್ಮಷ್ಟಮಿ

- Advertisement -G L Acharya panikkar
- Advertisement -

ಪುತ್ತೂರು ನಗರ ಹೊರವಲಯ ನೆಹರು ನಗರದ ಶಿವನಗರ ಎಂಬಲ್ಲಿ ಕಳೆದ 5 ವರ್ಷಗಳಿಂದ ನೃತ್ಯ, ಸಂಗೀತ, ಭಜನೆ, ಲಘು ಸಿನೇಮಾ ನಿರ್ಮಾಣ  ಕಲಾ ಚಟುವಟಿಕೆಗಳೊಂದಿಗೆ ಕಾರ್ಯಾಚರಿಸುತ್ತಿರುವ ಶಿವಮಣಿ ಕಲಾ ಸಂಘ (ರಿ. ಸಂಖ್ಯೆ 604:2021-22) ಇದರ 5ನೇ ವರ್ಷದ ವಾರ್ಷಿಕೋತ್ಸವ ಹಾಗೂ ಪ್ರಥಮ  ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ  ಕಾರ್ಯಕ್ರಮ ಲಿಂಗನಗುಡ್ಡೆ ಶ್ರೀಸೋಮಲಿಂಗೇಶ್ವರ ಮಂದಿರದ ವಠಾರದಲ್ಲಿ ಸಡಗರ ಸಂಭ್ರಮದಿಂದ ಅಗಸ್ಟ್‌ 28 ರಂದು ಜರುಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಪೂರ್ವಾಹ್ನ ಗಂಟೆ 10 ಕ್ಕೆ ಸರಿಯಾಗಿ ಶ್ರೀ ಸೋಮಲಿಂಗೇಶ್ವರ ಮಂದಿರದಲ್ಲಿ ದೇವತಾ ಪ್ರಾರ್ಥನೆಯೊಂದಿಗೆ ಸ್ಥಳೀಯನಗರಸಭಾ ಸದಸ್ಯರಾದ ಶಿವರಾಮ ಸಪಲ್ಯ ದೀಪ ಬೆಳಗಿಸಿ ಶುಭ ಹಾರೈಕೆಗಳೊಂದಿಗೆ ಚಾಲನೆ ನೀಡಿದರು. ಅರುಣಾ ಆಚಾರ್ಯ ಪ್ರಾರ್ಥನೆ ಹಾಡಿದರು. ಮಾಸ್ಟರ್ ಶ್ರೀಮಾನ್ ಸ್ವಾಗತಿಸಿ ಸಂಘದ ಉಪಾಧ್ಯಕ್ಷ ಸುದರ್ಶನ್ ರವರು ಪ್ರಾಸ್ತಾವಿಕ ಭಾಷಣ ಮಾಡಿದರು. ಪಟ್ಲ ಸ್ಪೋರ್ಟ್ಸ್  ನೆಹರು ನಗರ ಮಾಲಕರಾದ  ಧನಂಜಯ್ ಪಟ್ಲರವರು ಮುಖ್ಯ ಅಥಿತಿಗಳಾಗಿ ಪಾಲ್ಗೊಂಡು ಶುಭ ಹಾರೈಸಿದರು. ವೇದಿಕೆಯಲ್ಲಿ ಸಂಜೀವ ಸಪಲ್ಯ,  ಚಂದ್ರಾವತಿ ಶೇವಿರೆ ಹಾಗೂ ದೇವಸ್ಥಾನದ ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಹಾಗೂ ಶಿವಮಣಿ ಸಾಂಸ್ಕೃತಿಕ  ಕಲಾ ಸಂಘದ ಅಧ್ಯಕ್ಷರುಗಳು ಉಪಸ್ಥಿತರಿದ್ದರು. 

ಬಳಿಕ ಅರು ತಿಂಗಳ ಶಿಶು ವಯೋಮಾನದಿಂದ 5 ವರ್ಷದವರೆಗಿಗ ಮಕ್ಕಳ  ಕೃಷ್ಣ ವೇಷ ಸ್ಪರ್ಧೆ  ಹಾಗೂ ವಿವಿಧ ಕೃಷ್ಣ ವೇಷ  ಪ್ರದರ್ಶನ ನಡೆಯಿತು. ಒಟ್ಟು 24 ಕಂದಮ್ಮಗಳು  ಕೃಷ್ಣ ವೇಷ ಸ್ಪರ್ದೆಯಲ್ಲಿ  ಪಾಲ್ಗೊಂಡಿದ್ದರು. ಆಟೋಟ ಸ್ಪರ್ದೆಯಲ್ಲಿ ಪುಟ್ಟ ಮಕ್ಕಳಿಗೆ ಬಾಲ್ ಪಾಸಿಂಗ್,  ಬಕೆಟ್ಟಿಗೆ ಬಾಲ್ ಎಸೆತ,  ಬಾಲಕ,ಬಾಲಕಿಯರಿಗೆ ಸಂಗೀತ ಕುರ್ಚಿ, ವಯಸ್ಕ  ಮಹಿಳೆಯರಿಗೆ ನಿಂಬೆ ಚಮಚ ಓಟ, ಹಗ್ಗ ಜಗ್ಗಾಟ, ಸಂಗೀತ ಕುರ್ಚಿ  ಆಟ, ಪುರುಷರಿಗೆ ಹಗ್ಗ ಜಗ್ಗಾಟ,ಸಂಗೀತ ಕುರ್ಚಿ ಸ್ಪರ್ಧೆ ಏರ್ಪಡಿಸಲಾಯಿತು. 

ಮಧ್ಯಾಹ್ನ ಗಂಟೆ 12 ರಿಂದ ಸಿಂಪಲ್ ಮೆಲೊಡಿಸ್ ತಂಡ ಪಡ್ಡಾಯೂರು ಬಳಗದ  ಆಹ್ವಾನಿತ ಕಲಾವಿದರಿಂದ ಸುಗಮ ಸಂಗೀತ, ಭಕ್ತಿ ಗೀತೆ, ನೃತ್ಯಗೀತೆ ರಸಮಂಜರಿ ನಡೆಯಿತು. ದಾನಿಗಳ ಸಹಕಾರದಲ್ಲಿ ಮಧ್ಯಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ 300 ಕ್ಕೂ ಅಧಿಕ ಸಂಖ್ಯೆಯಲ್ಲಿ ಜನ ಪಾಲ್ಗೊಂಡಿದ್ದರು.

ಸಂಜೆ ಗಂಟೆ 4 ರಿಂದ ನಡೆದ ಸಭಾ ಕಾರ್ಯಕ್ರಮ, ಪ್ರಶಸ್ತಿ ಪ್ರಧಾನ ಕಾರ್ಯಕ್ರಮ,ಅಟೋಟ ಸ್ಪರ್ಧೆಗಳ ಬಹುಮಾನ  ವಿತರಣೆಯಲ್ಲಿ ಸಮಾರಂಭದ ಅಧ್ಯಕ್ಷತೆಯನ್ನು ನಗರಸಭೆ ಅಧ್ಯಕ್ಷ  ಜೀವಂಧರ್ ಜೈನ್ ಅನುಪಸ್ಥಿತಿಯಲ್ಲಿ ಸ್ಥಳೀಯ ಕೌನ್ಸಿಲರ್ ಶಿವರಾಮ ಸಪಲ್ಯ ಅಲಂಕರಿಸಿದರು. ಮುಖ್ಯ ಅತಿಥಿಗಳಾಗಿ  ಅಶೋಕ್ ಕುಮಾರ್ ರೈ ಅರ್ಪಿಣಿ ಗುತ್ತು, ಸಹಜ್ ರೈ ಬಳಜ್ಜ, ಜಿ. ಜಗದೀಶ್ ನಾಯಕ್ ಉಪ್ಪಿನಂಗಡಿ, ಪುತ್ತೂರು ತಾಲೂಕು ಕ್ರೀಡಾಧಿಕಾರಿ ಶ್ರೀಕಾಂತ್ ಪೂಜಾರಿ ಬಿರಾವು, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ ನಾಯಕ್, ಕೆ.ಬಿ.  ಜನಾರ್ಧನ್ ಗೌಡ, ಶಿವರಾಮ ಸಪಲ್ಯ ಮತ್ತು  ಶಿವಮಣಿ ಕಲಾ ಸಂಘದ  ಅಧ್ಯಕ್ಷರಾದ ದೀಪಕ್ ಪೈ ಉಪ್ಪಿನಂಗಡಿ ಹಾಗೂ  ಸಾಂಸ್ಕೃತಿಕ ಸಲಹಾ ಸಮಿತಿಯ ಅಧ್ಯಕ್ಷರಾದ ಸಂತೋಷ್ ಜೆ.ಪಿ. ಮುರ ಉಪಸ್ಥಿತರಿದ್ದರು. 

ಸಂಚಾಲಕರಾದ ಮನುಕುಮಾರ್ ಶಿವನಗರ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.  ಸಭಾ ಕಾರ್ಯಕ್ರಮದಲ್ಲಿ ಕಲಾವಿದರು ಮತ್ತು ಕಲಾ ಪೋಷಕ 17 ಸಾಧಕರಿಗೆ  ಬಿರುದು, ಪ್ರಶಸ್ತಿ ಹಾಗೂ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು. ಉಪ್ಪಿನಂಗಡಿಯ ಗಂಗಾಧರ್ ಟೈಲರ್ ಕೋಟೆ ಇವರಿಗೆ ಕಲಾ ಕೌಸ್ತುಭ, ರಾಜಶೇಖರ್ ಶಾಂತಿನಗರ ಇವರಿಗೆ ಹಾಸ್ಯ ಸಿಂಧೂರ , ಅಶೋಕ್ ಬನ್ನೂರುರವರಿಗೆ ಕಲಾ ಚತುರ, ದೀಪಕ್ ಯು. ಪೈ ಯವರಿಗೆ ಸವ್ಯಸಾಚಿ,  ಪುತ್ತೂರು ತಾಲೂಕು ಕ್ರೀಡಾಧಿಕಾರಿ ಶ್ರೀಕಾಂತ್ ಬಿರಾವುವರಿಗೆ ಪ್ರತಿಭಾ ರತ್ನ ಬಿರುದು, ಶಿವಮಣಿ ಕಲಾ ಸಂಘದ ನವೀನ್ ಸೀಟಿ ಗುಡ್ಡೆ ಇವರಿಗೆ ಸೌಖ್ಯ ಸಂಧಾನಕಾರ ಬಿರುದು, ಸುದರ್ಶನ್ ಪುತ್ತೂರು,  ಕಲಾವಿಧ ಕೃಷ್ಣಪ್ಪ ಶಿವನಗರ, ಸಂತೋಷ್ ಜೆ.ಪಿ. ಮುರ, ಶ್ರೀಧರ್ ಯು.ಕೆ. ಕುಂಜಾರು, ಅನ್ನಪೂರ್ಣಾ ಟೀಚರ್, ಅರುಣಾ ಆಚಾರ್ಯ, ನಿರ್ಮಲಾ ದೇವಾಡಿಗ, ನಳಿನಿ ಪಡ್ಡಾಯೂರುಗಳವರಿಗೆ ಸೇವಾ ರತ್ನ ಪ್ರಶಸ್ತಿ, ಬಾಲ ಕಲಾವಿದರಾದ ಕು.ನಿಹಾರಿಕಾ ಕಾಟುಕುಕ್ಕೆ, ಕು. ಮೋನಿಕ ಬಿ.ವಿ. ಹಾಗೂ ಕು. ಮನಸ್ವೀ ಪಿ. ಇವರಿಗೆ ಸ್ಟಾರ್ ಅಪ್ ದಿ ಶಿವಮಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಂಚಾಲಕ ಮನುಕುಮಾರ್ ರವರಿಗೆ “ಸಂಘಟನಾ ಸಾರಥಿ” ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಅದಲ್ಲದೆ ಹಲವರಿಗೆ ಸ್ಮರಣಿಕೆಗಳನ್ನು ನೀಡಲಾಯಿತು. ಸಭಾಕಾರ್ಯಕ್ರಮದ ಅತಿಥಿ ಅಶೋಕ್ ಕುಮಾರ್ ರೈ ಅರ್ಪಿಣಿ ಗುತ್ತು, ಸಹಜ್ ರೈ ಬಳಜ್ಜ, ಜಿ. ಜಗದೀಶ್ ನಾಯಕ್ ಉಪ್ಪಿನಂಗಡಿ, ಪುತ್ತೂರು ತಾಲೂಕು ಶ್ರೀಕಾಂತ್ ಪೂಜಾರಿ ಯು. ಬಿರಾವು, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ ನಾಯಕ್, ಕೆ.ಬಿ.  ಜನಾರ್ಧನ್ ಗೌಡ ಶಿವಮಣಿ ಕಲಾಸಂಘದ ಚಟುವಟಿಕೆ ಹಾಗೂ ಯಶಸ್ವಿ ಕಾರ್ಯಕ್ರಮವನ್ನು ಮನತುಂಬಿ ಕೊಂಡಾಡಿದರು.

ಐದು ವರ್ಷಗಳ ಹಿಂದೆ ಯುವ ಕಣ್ಮಣಿ ಮನು ಕುಮಾರ್ ಸಾರಥ್ಯದಲ್ಲಿ ಬೆರಳೆಣಿಕೆಯ ಯುವಕರೊಂದಿಗೆ  ಆರಂಭಗೊಂಡ ಶಿವಮಣಿ  ಕಲಾ ತಂಡ 5ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ತಂಡವನ್ನು ಹಿರಿಯ ಸುದರ್ಶನ್ ಪುತ್ತೂರುರವರ ಮಾರ್ಗದರ್ಶನ ಮತ್ತು ಸಹಕಾರದಲ್ಲಿ ಶಿವ ಮಣಿ ಕಲಾ ಸಂಘ ಎಂದು ಮರುನಾಮಕರಣಗೊಂಡು ಸರಕಾರದ ಸಬ್ ರಿಜಿಸ್ಟ್ರಾರ್  ಕಚೇರಿಯಲ್ಲಿ ನೊಂದಾವಣೆ ಮಾಡಲಾಗಿತ್ತು. ಅನ್ನಪೂರ್ಣ ಟೀಚರ್ ಧನ್ಯವಾದ ಸಮರ್ಪಿಸಿದರು. ವಿನೋದ್ ಪಿ. ಕಲ್ಲೇಗ ಕಾರ್ಯಕ್ರಮದ ನಿರೂಪಣೆಗೈದರು.   

- Advertisement -

Related news

error: Content is protected !!