- Advertisement -
- Advertisement -
ಪುತ್ತೂರು: ಬನ್ನೂರಿನಲ್ಲಿರುವ ಪ್ರಾದೇಶಿಕ ಸಾರಿಗೆ ಇಲಾಖೆಯ ಹೊರ ಆವರಣದಲ್ಲಿ ಖಾಸಗಿ ಸಂಸ್ಥೆಯ ವ್ಯಕ್ತಿ ಮತ್ತು ಸಾರ್ವಜನಿಕರೊಬ್ಬರ ನಡುವೆ ಮಾತಿನ ಚಕಮಕಿ ನಡೆದು ಕೊನೆಗೆ ಅದು ಹಲ್ಲೆ ನಡೆಸುವ ಹಂತಕ್ಕೂ ಏರಿದ ಘಟನೆ ನಡೆದಿದೆ.
ಸಾರ್ವಜನಿಕರೊಬ್ಬರು ಬ್ಲಾಕ್ ಆಗಿರುವ ವಾಹನ ಚಲನಾ ಪರವಾನಿಗೆಯ ದಾಖಲೆ ಪತ್ರವನ್ನು ಖಾಸಗಿ ಸಂಸ್ಥೆಯೊಬ್ಬರ ಮೂಲಕ ಪ್ರಾದೇಶಿಕ ಸಾರಿಗೆ ಕಚೇರಿಗೆ ನೀಡುವಲ್ಲಿ ನಡೆದ ವ್ಯತ್ಯಾಸಕ್ಕೆ ಸಂಬಂಧಿಸಿ ಅವರಿಬ್ಬರೊಳಗೆ ಕಚೇರಿಯ ಹೊರ ಆವರಣದ ಗೇಟ್ ಬಳಿ ಮಾತಿನ ಚಕಮಕಿ ನಡೆದಿದೆ. ಬಳಿಕ ಇಬ್ಬರು ಪರಸ್ಪರ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ಕುರಿತು ಸ್ಥಳೀಯರು ಇಬ್ಬರನ್ನೂ ಸಮಾಧಾನ ಪಡಿಸಿದ್ದಾರೆ ಎಂದು ತಿಳಿದುಬಂದಿದೆ.
- Advertisement -