- Advertisement -
- Advertisement -
ಬಾಗಲಕೋಟೆ: ಜಿಲ್ಲೆಯಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ, ರಾತ್ರೋ ರಾತ್ರಿ ನಗರದ ಪೊಲೀಸ್ ಕಾಲೋನಿಗೆ ನುಗ್ಗಿದ ಖದೀಮರು 3 ಮನೆ, ದೇವಸ್ಥಾನಗಳಿಗೆ ಕನ್ನ ಹಾಕಿ ಅಪಾರ ಪ್ರಮಾಣದ ಹಣ ಮತ್ತು ಚಿನ್ನದ ಅಭರಣಗಳನ್ನು ಎಗರಿಸಿ ಪರಾರಿಯಾಗಿದ್ದಾರೆ.
ಜಿಲ್ಲೆಯ ಸೀಗಿಕೇರಿ ಕ್ರಾಸ್ ಬಳಿ ಇರುವ ಪದ್ಮನಯನ ನಗರದಲ್ಲಿ, ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದರಿಂದ ಇದನ್ನು ಪೊಲೀಸ್ ಕಾಲೋನಿ ಎಂದೇ ಕರೆಯಲಾಗುತ್ತದೆ. ಪೊಲೀಸರೆ ಇರುವ ನಗರದಲ್ಲಿ ಕನ್ನ ಹಾಕಿರುವ ಚಾಲಾಕಿ ಕಳ್ಳರು ನಿವೃತ್ತ ಯೋಧರೊಬ್ಬರು ಬಾಡಿಗೆ ಕೊಟ್ಟಿದ್ದ ಮನೆಯ ಕೀಲಿ ಮುರಿದು ತಿಜೋರಿ ಒಡೆದು 4 ಲಕ್ಷ ಮೌಲ್ಯದ ಆಭರಣಗಳನ್ನು ಎಗರಿಸಿದ್ದಾರೆ.
ಅಷ್ಟೇ ಅಲ್ಲದೇ ನಗರದ ಆಂಜನೇಯ ದೇವಸ್ಥಾನಕ್ಕೂ ಲಗ್ಗೆ ಇಟ್ಟ ಖತರ್ನಾಕ್ ಕಳ್ಳರು ದೇವಸ್ಥಾನದ ಹುಂಡಿ ಮುರಿದು, ಹುಂಡಿಯ ಹಣವನ್ನು ಹೊತ್ತೊಯ್ದಿದ್ದಾರೆ. ಈನ್ನು ಖದೀಮರ ಸರಣಿಗಳ್ಳತನಕ್ಕೆ ಕಾಲೋನಿಯ ನಿವಾಸಿಗಳು ಬೆಚ್ಚಿಬಿದ್ದಿದ್ದು, ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
- Advertisement -