ಬಂಟ್ವಾಳ: ಟೆಂಪೋ ವಾಹನದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ವಧೆ ಮಾಡಲು ಸಾಗಾಟ ಮಾಡುತ್ತಿದ್ದ ದನ, ಹಾಗೂ ಕರುವೊಂದನ್ನು ವಶಕ್ಕೆ ಪಡೆದುಕೊಂಡು,ಅವುಗಳನ್ನು ಬಂಟ್ವಾಳ ನಗರ ಪೊಲೀಸರು ರಕ್ಷಿಸಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪುದು ಗ್ರಾಮದ ಬಶೀರ್ ಕೆ ಹಾಗೂ ಒಕ್ಕೆತ್ತೂರು ಗ್ರಾಮದ ಜೆರಾಲ್ಡ್ ಮಸ್ಕರೇನಸ್ ಎಂಬ ಬಂಧಿತ ಆರೋಪಿಗಳು.
ಬಂಟ್ವಾಳ ತಾಲೂಕು ಗೋಳ್ತಮಜಲು ಗ್ರಾಮದಲ್ಲಿ ರಾಮಕೃಷ್ಣ ಪಿಎಸ್ಐ ಅವರು ಗಣೇಶ್ ನಗರ ಎಂಬಲ್ಲಿ ಸಿಬ್ಬಂದಿ ಹಾಗೂ ಪಂಚರೊಂದಿಗೆ ಗಸ್ತುನಲ್ಲಿದ್ದ ವೇಳೆ ಸುಮಾರು ವಿಟ್ಲ ಕಡೆಯಿಂದ ಬರುತ್ತಿದ್ದ ಟೆಂಪೋ ವಾಹನವನ್ನು ನಿಲ್ಲಿಸಿ ತಪಾಸಣೆ ನಡೆಸಿದ ಈ ವೇಳೆ ವಾಹನದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ವಧೆ ಮಾಡಲು ಸಾಗಾಟ ಮಾಡುತ್ತಿದ್ದ ದನ, ಹಾಗೂ ಕರುವೊಂದನ್ನು ವಶಕ್ಕೆ ಪಡೆದುಕೊಂಡು, ಬಂಧಿತರಿಂದ ರೂ.13,000 ಮೌಲ್ಯದ ದನ, ಸುಮಾರು ರೂ.3,000 ರೂ. ದನದ ಕರು ಹಾಗೂ ಸಾಗಾಟ ಮಾಡಲು ಉಪಯೋಗಿಸಿದ ರೂ.75,000 ಮೌಲ್ಯದ ಟೆಂಪೋ ಪಿಕಪ್ ವಾಹನವನ್ನು ವಶಕ್ಕೆ ಪಡೆದು ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ನಡೆಸಲಾಗುತ್ತಿದೆ.