Thursday, May 9, 2024
spot_imgspot_img
spot_imgspot_img

ಬಂಟ್ವಾಳ: ಕ್ಷುಲ್ಲಕ ಕಾರಣಕ್ಕೆ ಮಾವನಿಂದಲೇ ಸೊಸೆಗೆ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿ ಜೀವ ಬೆದರಿಕೆ; ದೂರು ದಾಖಲು

- Advertisement -G L Acharya panikkar
- Advertisement -
driving

ಬಂಟ್ವಾಳ: ಕ್ಷುಲ್ಲಕ ಕಾರಣಕ್ಕೆ ಮಹಿಳೆಯೋರ್ವರಿಗೆ ಮಾವ ಹಾಗೂ ಪತಿಯ ತಮ್ಮನ ಹೆಂಡತಿ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಘಟನೆ ಬಂಟ್ವಾಳ ತಾಲೂಕಿನ ಪೆರುವಾಯಿಯ ಕೆದುಮೂಲೆ ಎಂಬಲ್ಲಿ ನಡೆದಿದೆ.

ಸೆ.19 ರಂದು ಶೀಲಾವತಿ ಎಂಬವರು ತಮ್ಮ ಮಕ್ಕಳೊಂದಿಗೆ ಮನೆಯ ಬಳಿ ಇರುವ ನೀರಿನ ಕಣಿವೆಯಲ್ಲಿ ಇದ್ದ ಸಂದರ್ಭದಲ್ಲಿ ಶೀಲಾವತಿಯವರ ಗಂಡನ ತಮ್ಮನ ಹೆಂಡತಿ ಲಲಿತಾ ಎಂಬಾಕೆ ತನ್ನ ಮಾವನ ದೈಯುಯವರ ಬಳಿ ಶೀಲಾವತಿ ಮಕ್ಕಳೊಂದಿಗೆ ನೀರಿನ ಕಣಿವೆಗೆ ಹೋಗಿದ್ದಾಳೆ ಹೋಗಿ ಜೋರು ಮಾಡಿ ಎಂದು ಹೇಳಿದ್ದಾರೆ.

ದೈಯು ಪಂಡಿತ್ ಕೈಯಲ್ಲೊಂದು ದೊಣ್ಣೆ ಹಿಡಿದುಕೊಂಡು ಮಕ್ಕಳೊಂದಿಗೆ ನೀರಿನಲ್ಲಿ ಯಾಕೆ ಇದ್ದಿಯಾ ಎಂದು ಅವಾಚ್ಯ ಶಬ್ದಗಳಿಂದ ಬೈಯುತ್ತಾ ಕೈಯಲ್ಲಿದ್ದ ದೊಣ್ಣೆಯಿಂದ ಶೀಲಾವತಿಯವರ ಎರಡು ಕಾಲಿನ ತೊಡೆಗೆ ಜೋರಾಗಿ ಹೊಡೆದಿದ್ದು, ಆ ವೇಳೆಗಾಗಲೇ ಲಲಿತಾ ಕೂಡಾ ಅಲ್ಲಿಗೆ ಬಂದು ನೀನು ನೀರಿನ ಕಣಿವೆಗೆ ಸಾಯಲಿಕ್ಕೆ ಬಂದಿದ್ದೀಯಾ ಎಂದು ಅವಾಚ್ಯ ಶಬ್ದಗಳಿಂದ ಬೈದಿದ್ದು ಈ ವೇಳೆ ಶೀಲಾವತಿ ಬೊಬ್ಬೆ ಹೊಡೆದಿದ್ದಾರೆ.

ಈ ಸಂದರ್ಭದಲ್ಲಿ ಶೀಲಾವತಿಯವರ ಮಾವ ದೈಯು ಬೊಬ್ಬೆ ಹೊಡೆದರೆ ನಿನ್ನನ್ನು ನೀರಿನಲ್ಲಿ ಮುಳುಗಿಸಿ ಸಾಯಿಸದೆ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿದ್ದಾನೆ.

ದೊಣ್ಣೆಯ ಏಟಿನಿಂದಾಗಿ ಗಾಯಗೊಂಡಿದ್ದ ಶೀಲಾವತಿಯವರು ಕಾಸರಗೋಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಶೀಲಾವತಿಯವರು ನೀಡಿದ ದೂರಿನನ್ವಯ ವಿಟ್ಲ ಠಾಣೆಯಲ್ಲಿ ಅ.ಕ್ರ.126/2021 ಕಲಂ 324, 505, 506, 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!