Thursday, April 25, 2024
spot_imgspot_img
spot_imgspot_img

ಬಂಟ್ವಾಳ: ಗೂಡಿನಬಳಿ ವಲಯ ಕಾಂಗ್ರೆಸ್ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮ; ಬಿಜೆಪಿ, ಎಸ್ ಡಿಪಿಐ ಪಕ್ಷದ ಹಲವಾರು ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ!

- Advertisement -G L Acharya panikkar
- Advertisement -

ಬಂಟ್ವಾಳ: ಇತ್ತೀಚೆಗೆ ಗೂಡಿನಬಳಿ ವಲಯ ಕಾಂಗ್ರೆಸ್ ವಾರ್ಡ್ 13 ಹಾಗೂ 14 ಕ್ಕೆ ನೂತನವಾಗಿ ಆಯ್ಕೆಯಾದ ನವ ಸಾರಥಿಗಳಿಗೆ ಬಂಟ್ವಾಳ ಮಾಜಿ ಶಾಸಕರು,ಸಚಿವರೂ ಆದ ರಮನಾಥ ರೈ ಅವರ ಗಣ್ಯ ಉಪಸ್ಥಿತಿಯಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಎಸ್ ಡಿಪಿಐ, ಬಿಜೆಪಿ ಪಕ್ಷದಿಂದ ನಲ್ವತ್ತಕ್ಕೂ ಅಧಿಕ ಯುವ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತ ಒಪ್ಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ನೂತನವಾಗಿ ಸೇರ್ಪಡೆಗೊಂಡ ಸರ್ವರಿಗೂ ಶಾಲು ಹೊದಿಸಿ ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ರಮನಾಥ ರೈ ಅವರು ಮಾತನಾಡಿ ಬಿಜೆಪಿ ಆಡಳಿತ ವೈಫಲ್ಯ ಮತ್ತು ಬಿಜೆಪಿ, ಎಸ್ ಡಿಪಿಐ ಪಕ್ಷಗಳಲ್ಲಿನ ಕೋಮುವಾದಿ ಸಿದ್ದಾಂತದ ಬಗ್ಗೆ ಜನರಿಗೆ, ಯುವ ಪೀಳಿಗೆಗೆ ಅರಿವು ಮೂಡಿಸದಿದ್ದಲ್ಲಿ ಕೋಮುವಾದಿಗಳ ಬೆಳವಣಿಗೆ ದೇಶದ ಪ್ರಜಾಪ್ರಭುತ್ವವನ್ನು ಅಪಾಯಕಾರಿ ಸ್ಥಿತಿಗೆ ತಂದೊಡ್ಡಲಿದೆ ಎಂದು ವಿವರಿಸಿದರು.

ಹಾಗೂ ಪಕ್ಷ ಸಂಘಟಿಸಿ ಪಕ್ಷವನ್ನು ಬಲ ಪಡಿಸುವ ಬಗ್ಗೆ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೀಪ್ ಮಾಣಿ ಅವರು ಮಾತನಾಡಿ ನೂತನವಾಗಿ ಸೇರ್ಪಡೆಯಾದ ಇತರ ಪಕ್ಷಗಳ ಕಾರ್ಯಕರ್ತರಿಗೆ ಹುರಿದುಂಬಿಸಿದರು.

driving

ಕಾರ್ಯಕ್ರಮದಲ್ಲಿ ಸ್ಥಳೀಯ ನಾಯಕರಾದ ಅಬ್ಬಾಸ್ ಆಲಿ, ಲೋಲಾಕ್ಷ, ಮೊಹಮ್ಮದ್ ನಂದಾವರ, ಸ್ವಾಲಿಹ್, ಇಸ್ಮಾಯಿಲ್ ಹಾಗೂ ಯುವ ನಾಯಕರಾದ ನವಾಝ್ ಬಡಕಬೈಲು, ಅರ್ಶದ್ ಸರವು ಉಪಸ್ಥಿತರಿದ್ದರು.
ವಲಯ ಗೌರವಾಧ್ಯಕ್ಷ ಚಾಚಾ ಖಾದರ್, ವಲಯ ಅಧ್ಯಕ್ಷ ರಝಾಕ್ ಟಿ,

ಬೂತ್ ಅಧ್ಯಕ್ಷರಾದ ಖಾಸಿಂ ಎಂಕೆ, ಸತ್ಯ ನಾರಾಯಣ್ ರಾವ್ ಹಾಗೂ ಪದಾಧಿಕಾರಿಗಳಾದ ಫ್ರಾನ್ಸಿಸ್, ಹಸನಾಕ, ರಹೀಂ, ಅಲೀಂ, ಪ್ರದೀಪ್ ಕಿನ್ನಿ ಮತ್ತು ಸ್ಥಳೀಯ ಯುವ ಕಾಂಗ್ರೆಸ್ ನಾಯಕರಾದ ರಿಝ್ವಾನ್, ಅಮೀನ್ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಇಸ್ರಾರ್ ಗೂಡಿನಬಳಿ‌ ಅವರು ಧನ್ಯವಾದಗೈದರು.

- Advertisement -

Related news

error: Content is protected !!