Saturday, May 18, 2024
spot_imgspot_img
spot_imgspot_img

ಬಂಟ್ವಾಳ: ಬೈಕಿನಲ್ಲಿ ಹೋಗುತ್ತಿದ್ದ ವೇಳೆ ಬಿಯರ್ ಬಾಟಲಿಯಿಂದ ಹಲ್ಲೆ; ದೂರು ದಾಖಲು

- Advertisement -G L Acharya panikkar
- Advertisement -

ಬಂಟ್ವಾಳ: ಬೈಕಿನಲ್ಲಿ ಹೋಗುತ್ತಿರುವ ವೇಳೆ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ. ನರಿಕೊಂಬು ಗ್ರಾಮದ ಮೊಗರ್ನಾಡು ಎಂಬಲ್ಲಿ ಈ ಘಟನೆ ನಡೆದಿದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಅಭಿಜಿತ್ ಹಾಗೂ ಆತನ ಸ್ನೇಹಿತ ರಾಜೇಶ್ ನ ಮೇಲೆ ಹಲ್ಲೆ ನಡೆಸಲಾಗಿದೆ. ಅಭಿಜಿತ್ ಸ್ನೇಹಿತ ರಾಜೇಶ್ ನನ್ನು ಮನೆಗೆ ಡ್ರಾಪ್ ಕೊಡಲು ಬೈಕಿನಲ್ಲಿ ಹೋಗುತ್ತಿದ್ದ ವೇಳೆ ನರಿಕೊಂಬು ಗ್ರಾಮದ ಮೊಗರ್ನಾಡು ಎಂಬಲ್ಲಿರುವ ತರಕಾರಿ ಅಂಗಡಿ ಬದಿಯಲ್ಲಿ ಬಿಯರ್ ಕುಡಿಯುತ್ತಾ ನಿಂತುಕೊಂಡಿದ್ದ ಗುಂಪೊಂದು ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದೆ ಎಂದು ದೂರು ನೀಡಲಾಗಿದೆ.

ಪ್ರವೀಣ್ ಯಾನೆ ಅಜ್ಜಿಪುಲ್ಲಿ, ರಂಜಿತ್ ಯಾನೆ ಟ್ರೋಫಿ, ಸುಧೀರ್ ಯಾನೆ ಬೋಟು, ರಾಜೇಶ್ ಯಾನೆ ಲಾರ ಹಾಗೂ ಪ್ರಕಾಶ್ ಕೋಡಿಮಜಲು ಎಂಬವರು ಗುಂಪು ಸೇರಿಕೊಂಡು ಬೈಕ್ ನಲ್ಲಿ ಹೋಗುತ್ತಿದ್ದ ಅಭಿಜಿತ್ ಹಾಗೂ ರಾಜೇಶ್ ನನ್ನು ತಡೆದು ನಿಲ್ಲಿಸಿ ಅವ್ಯಾಚ್ಚ ಶಬ್ದಗಳಿಂದ ಬೈದು ಬಳಿಕ ಹಲ್ಲೆ ನಡೆಸಿದ್ದಾರೆ ಎಂದು ದೂರು ದಾಖಲಾಗಿದೆ.

ಘಟನೆಯಿಂದ ಗಾಯಗೊಂಡ ಇವರು ಸರಕಾರಿ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಇನ್ನು ಎರಡು ದಿನಗಳ‌ ಹಿಂದೆ ಅಭಿಜಿತ್ ಅವರ ತಂಡ ಪ್ರವೀಣ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ನಗರ ಠಾಣೆಗೆ ದೂರು ನೀಡಿದ್ದರು. ವೈಯಕ್ತಿಕ ವಿಚಾರದಲ್ಲಿ ಮಧ್ಯ ಸೇವಿಸಿ ನಡೆದ ಎರಡು ಗುಂಪುಗಳ ಗಲಾಟೆ ಇದೀಗ ಇತ್ತಂಡಗಳು ಪ್ರಕರಣ ದಾಖಲಿಸುವ ಮೂಲಕ ಯುವಕರ ನಡುವೆ ಮೊಗರ್ನಾಡುವಿನಲ್ಲಿ ದ್ವೇಷದ ವಾತವರಣ ನಿರ್ಮಾಣ ವಾಗಿದೆ ಎಂಬ ಮಾತುಗಳು ಸ್ಥಳೀಯವಾಗಿ ಕೇಳಿ ಬಂದಿದೆ.

- Advertisement -

Related news

error: Content is protected !!