ಪರಬು ಸೈಪುನಿಲ ಇಜ್ಜಿ’, (ಮುದಕಿ ಸಾಯುವುದು ಕೂಡ ಇಲ್ಲ) ಎಂಬುದಾಗಿ ಬೈಯುತ್ತಿದ್ದು, ಹಸಿವೆಯಿಂದ ಊಟ ಕೇಳಿದರೆ ‘ಪರಬು ನಿಕ್ಕ್ ವನಸ್ ಕೊರ್ಪುಜ್ಜಿ, ಮಣ್ಣ್ ತಿಂದುದು, ಸೈಲ’ (ಮುದುಕಿ ನಿನಗೆ ಊಟ ಕೊಡುವುದಿಲ್ಲ, ಮಣ್ಣು ತಿಂದು ಸಾಯಿ) ಎಂದು ಸೊಸೆಯು ಬೈಯುತ್ತಿದ್ದಳು.
ಬಂಟ್ವಾಳ : ಮಗ ಮತ್ತು ಸೊಸೆ ಸೇರಿ 70 ವರ್ಷದ ತಾಯಿಯನ್ನು ಶೌಚಗೃಹದಲ್ಲಿ ಹಾಕಿ ಒಂದು ಹೊತ್ತು ಊಟ ನೀಡದೆ ಅವರ ಸಾವಿಗಾಗಿ ಕಾಯುತ್ತಿದ್ದ ಘಟನೆ ಬಂಟ್ವಾಳ ತಾಲೂಕಿನ ಕಳ್ಳಿಗೆ ಬೆಂಜನಪದವು ಕರಾವಳಿ ಸೈಟ್ ಎಂಬಲ್ಲಿ ನಡೆದಿದೆ.
ಆರೋಪಿಗಳನ್ನು ಹರಿರಾಂ ಮತ್ತು ಪೂಜಾ ಎನ್ನಲಾಗಿದೆ. ಗಿರಿಜಾ ಎಂಬವರಿಗೆ 70 ವರ್ಷ ವಯಸ್ಸಾಗಿದ್ದು ಅವರ ಮಗನಾದ ಹರಿರಾಂ ಮತ್ತು ಸೊಸೆ ಪೂಜಾ ಅವರೊಂದಿಗೆ ವಾಸವಾಗಿದ್ದು, ವರ್ಷದ ಹಿಂದೆ ಅವರ ಮನೆಯ ಜಗುಲಿಯಲ್ಲಿ ಕಾಲು ಜಾರಿ ಬಿದ್ದು ಗಾಯವಾಗಿತ್ತು. ಅವರಿಗಾದ ಗಾಯಕ್ಕೆ ಮಗ ಮತ್ತು ಸೊಸೆ ಚಿಕಿತ್ಸೆ ಕೊಡಿಸದೆ ಇದ್ದು, ಬಿದ್ದು ಉಂಟಾದ ನೋವಿನಿಂದ ನಡೆಯಲು ಸಾಧ್ಯವಾಗದೆ ಹಾಸಿಗೆಯಲ್ಲಿ ಮಲಗುವಂತಾದಗಿತ್ತು, ಆದರೂ ಮಗ ಮತ್ತು ಸೊಸೆ ಯಾವುದೇ ಆರೈಕೆ ಮಾಡದೆ ಮನೆಯ ಶೌಚಗೃಹದಲ್ಲಿ ಹಾಕಿ ಒಂದೇ ಹೊತ್ತು ಊಟ ಮತ್ತು ಚಾ ನೀಡುತ್ತಿರಲಿಲ್ಲ ಎಂದು ಗಿರಿಜಾ ತಾವು ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇನ್ನು ತುಳು ಭಾಷೆಯಲ್ಲಿ ‘ಪರಬು ಸೈಪುನಿಲ ಇಜ್ಜಿ’, (ಮುದಕಿ ಸಾಯುವುದು ಕೂಡ ಇಲ್ಲ) ಎಂಬುದಾಗಿ ಬೈಯುತ್ತಿದ್ದು, ಹಸಿವೆಯಿಂದ ಊಟ ಕೇಳಿದರೆ ‘ಪರಬು ನಿಕ್ಕ್ ವನಸ್ ಕೊರ್ಪುಜ್ಜಿ, ಮಣ್ಣ್ ತಿಂದುದು, ಸೈಲ’ (ಮುದುಕಿ ನಿನಗೆ ಊಟ ಕೊಡುವುದಿಲ್ಲ, ಮಣ್ಣು ತಿಂದು ಸಾಯಿ) ಎಂದು ತುಳು ಭಾಷೆಯಲ್ಲಿ ಸೊಸೆಯು ಬೈಯುತ್ತಿದ್ದರು ಎನ್ನಲಾಗಿದೆ. 06-07-2022 ರಂದು ಮದ್ಯಾಹ್ನ 12 ಗಂಟೆಗೆ ಹಿರಿಯ ನಾಗರಿಕ ಸಮಿತಿಗೆ ಈ ಮಾಹಿತಿ ತಿಳಿದು ಗಿರಿಜಾ ಅವರನ್ನು ಶೌಚಗೃಹದಿಂದ ಹೊರಗೆ ಕರೆತಂದು ಉಪಚರಿಸಿ ನಂತರ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಿದ್ದಾರೆ ಎಂದು ತಿಳಿದಿ ಬಂದಿದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಗಿದೆ.