- Advertisement -
- Advertisement -
ಎಂಡಿಎಂಎ ಎಂಬ ನಿದ್ರಾಜನಕ ಪದಾರ್ಥ ಸೇವನೆ ಹಾಗೂ ಕಾರಿನಲ್ಲಿ ಸಾಗಾಟ ಮಾಡಿದ ವ್ಯಕ್ತಿಯೋರ್ವನನ್ನು ಬಂಟ್ವಾಳ ನಗರ ಠಾಣಾ ಎಸ್.ಐ.ರಾಮಕೃಷ್ಣ ನೇತ್ರತ್ವದ ಪೊಲೀಸ್ ತಂಡ ಆರೋಪಿಯನ್ನು ಬಂಧಿಸಿದೆ.
ಆರೋಪಿ ಮೊಹಮ್ಮದ್ ಆಸೀರ್ ಬೋಳಂತೂರು ಗ್ರಾಮದ ಕೋಡಿಕಂಡ ನಿವಾಸಿಯಾಗಿದ್ದು,
ಬಂಧಿತನಿಂದ 4 ಗ್ರಾಂ ಎಂಡಿಎಂಎ ನಿದ್ರಾಜನಕ ಸೊತ್ತು ಹಾಗೂ ಅಂದಾಜು ಒಂದುವರೆ ಲಕ್ಷಮೌಲ್ಯದ ಅಲ್ಟೋ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸಂಶಯದ ಮೇಲೆ ಕಾರನ್ನು ನಿಲ್ಲಿಸಿ, ತಪಾಸಣೆ ನಡೆಸಿದಾಗ ಈತ ಅಮಲು ಪದಾರ್ಥ ಸೇವನೆ ಮಾಡಿದ ಬಗ್ಗೆ ಅನುಮಾನ ಮೂಡಿದ ಪೊಲೀಸರ ತಂಡ ಹೆಚ್ಚಿನ ತನಿಖೆ ಮಾಡಿದ್ದು,ತನಿಖೆಯ ವೇಳೆ ಈತ ಲಾರಿ ಚಾಲಕ ಎಂದು ತಿಳಿದು ಬಂದಿದ್ದು,ಬೆಂಗಳೂರಿನ ವ್ಯಕ್ತಿಯೋರ್ವನ ಮೂಲಕ ಎಂಡಿಎಂಎ ಪಡೆದುಕೊಂಡು, ಮಂಗಳೂರು ಸುತ್ತ ಮುತ್ತ ಮಾರಾಟ ಮಾಡಲು ಅಲ್ಟೋ ಕಾರಿನಲ್ಲಿ ತೆರಳುತ್ತಿದ್ದ. ಆದರೆ ಈತನ ನಡವಳಿಕೆ ಮೇಲೆ ಸಂಶಯಗೊಂಡ ಪೊಲೀಸರು ವಾಹನ ತಡೆದು ವಿಚಾರಿಸಿದ್ದ ವೇಳೆ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
- Advertisement -