Tuesday, April 30, 2024
spot_imgspot_img
spot_imgspot_img

ಬಂಟ್ವಾಳ : 30 ಅಡಿ ಅಳಕ್ಕೆ ಉರುಳಿ ಬಿದ್ದ ಕಾರು.! ಪವಾಡಸದೃಶ್ಯವಾಗಿ ಪಾರಾದ ಚಾಲಕ

- Advertisement -G L Acharya panikkar
- Advertisement -

ಬಂಟ್ವಾಳ : ನಿದ್ದೆಯ ಮಂಪರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಸ್ತೆಯ ಬದಿಯ ಹೊಂಡಕ್ಕೆ ಉರುಳಿ ಬಿದ್ದ ಘಟನೆ ಪಾಣೆಮಂಗಳೂರು ಎಂಬಲ್ಲಿ ನಡೆದಿದೆ.

ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಯ ಪಾಣೆಮಂಗಳೂರು ಎಂಬಲ್ಲಿ ಈ ಘಟನೆ ನಡೆದಿದ್ದು, ಚಾಲಕ ನರಿಕೊಂಬು ನಿವಾಸಿ ಕುಶಾಂತ್ ಅವರು ಪವಾಡಸದೃಶ್ಯವಾಗಿ ಪಾರಾಗಿದ್ದಾರೆ. ರಸ್ತೆ ಕೆಳಗೆ ಸುಮಾರು 30 ಅಡಿ ಅಳಕ್ಕೆ ಕಾರು ಉರುಳಿ ಬಿದ್ದಿದೆ.

ಕುಶಾಂತ್ ಅವರು ಜನರೇಟರ್ ಮ್ಯಾಕಾನಿಕ್ ಕೆಲಸಗಾರನಾಗಿದ್ದು, ಉಡುಪಿಯಲ್ಲಿ ಜನರೇಟರ್ ರಿಪೇರಿ ಮುಗಿಸಿ ಬರುತ್ತಿದ್ದ ವೇಳೆ ಘಟನೆ ನಡದಿದೆ. ಉಡುಪಿಯಿಂದ ಬರುವ ವೇಳೆ ಮಂಗಳೂರಿನಲ್ಲಿ ಇಬ್ಬರು ಕೆಲಸಗಾರರನ್ನು ಮನೆಗೆ ಡ್ರಾಪ್ ಮಾಡಿ ಅ ಬಳಿಕ ಕುಶಾಂತ್ ಒಬ್ಬನೇ ಕಾರಿನಲ್ಲಿ ಬರುತ್ತಿದ್ದರು. ಮುಂಜಾವಿನ ವೇಳೆ ಸುಮಾರು 2.50 ರ ವೇಳೆ ನಿದ್ದೆಯ ಮಂಪರಿನಲ್ಲಿ ಕಾರು ನಿಯಂತ್ರಣ ತಪ್ಪಿ ಕಳೆಗೆ ಬಿದ್ದಿದೆ. ಇಂದು ಬೆಳಿಗ್ಗೆ ಕಾರನ್ನು ವಿಜಯಲಕ್ಷ್ಮಿ ಅವರ ಕ್ರೇನ್ ಬಳಸಿ ಕಾರನ್ನು ಮೇಲಕ್ಕೆತ್ತಲಾಗಿದೆ. ಘಟನೆಯ ಬಳಿಕ ದೃಶ್ಯವನ್ನು ನೋಡುವ ತವಕದಿಂದ ಹೆದ್ದಾರಿ ಯಲ್ಲಿ ಸಂಚಾರಕ್ಕೆ ಅಡಚಣೆಯಾಗದಂತೆ ಮೆಲ್ಕಾರ್ ಟ್ರಾಫಿಕ್ ಎಸ್.ಐ‌.‌ಮೂರ್ತಿ, ಎ.ಎಸ್.ಐ.ಸುರೇಶ್ ಪಡಾರ್ ಹಾಗೂ ಸಿಬ್ಬಂದಿ ಗಳು ಸ್ಥಳದಲ್ಲಿ ದ್ದು ಸಮಸ್ಯೆ ಬಗೆಹರಿಸಿದರು.

- Advertisement -

Related news

error: Content is protected !!