Sunday, May 5, 2024
spot_imgspot_img
spot_imgspot_img

ಬಂಡೆ ಮಠದ ಶ್ರೀಗೆ ಖೆಡ್ಡಾ ತೋಡಿದ ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಅರೆಸ್ಟ್‌

- Advertisement -G L Acharya panikkar
- Advertisement -

ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಕಂಚುಗಲ್ ಬಂಡೆ ಮಠದ ಬಸವಲಿಂಗ ಸ್ವಾಮೀಜಿ (45) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮೂವರ ಬಂಧನ ಆಗಿದೆ. ಕಣನೂರು ಮಠದ ಮೃತ್ಯುಂಜಯ ಶ್ರೀ, ದೊಡ್ಡಬಳ್ಳಾಪುರ ಮೂಲದ ಯುವತಿ ನೀಲಾಂಬಿಕೆ ಹಾಗೂ ಕಣನೂರು ಮಠದ ವಕೀಲ ಮಹದೇವಯ್ಯ ಬಂಧಿತ ಆರೋಪಿಗಳು.

ದೊಡ್ಡಬಳ್ಳಾಪುರ ಮೂಲದ ನೀಲಾಂಬಿಕಾ ಅಲಿಯಾಸ್ ಚಂದು ಎಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದು ರಜೆಯಲ್ಲಿ ತುಮಕೂರಿನಲ್ಲಿರುವ ಅಜ್ಜಿಯ ಮನೆಗೆ ಬರುತ್ತಿದ್ದಳು. ಈ ಸಂದರ್ಭದಲ್ಲಿ ಕಣ್ಣೂರು ಮೃತ್ಯಂಜಯ ಶ್ರೀಗಳ ಸಂಪರ್ಕಕ್ಕೆ ಯುವತಿ ಬಂದಿದ್ದಾಳೆ.

ಸಲುಗೆ ಜಾಸ್ತಿ ಆಗುತ್ತಿದ್ದಂತೆ ಬಂಡೇ ಮಠದ ಶ್ರೀಗಳನ್ನು ತನ್ನ ತಾಳಕ್ಕೆ ತಕ್ಕಂತೆ ನೀಲಾಂಬಿಕಾ ಕುಣಿಸಿದ್ದಾಳೆ. ವೀಡಿಯೋ ಚಾಟ್ ಆರಂಭಿಸಿದ್ದು ಅಲ್ಲದೇ ಚಾಟಿಂಗ್‌ ವೇಳೆ ನಗ್ನವಾಗುವಂತೆ ಹೇಳಿದ್ದಾಳೆ. ಆಕೆಯ ವೈಯ್ಯಾರದ ಮಾತಿಗೆ ಮರುಳಾದ ಶ್ರೀ ನಗ್ನವಾಗಿದ್ದಾರೆ. ಈ ಸಂದರ್ಭದಲ್ಲಿ ವೀಡಿಯೋ ಕರೆಗಳನ್ನು ಆಕೆ ರೆಕಾರ್ಡ್‌ ಮಾಡುತ್ತಿದ್ದಳು. ಆ ವೀಡಿಯೋ ಚಾಟಿಂಗ್ ರೆಕಾರ್ಡ್ ಅನ್ನು ಯುವತಿ ಮಹಾದೇವಯ್ಯನಿಗೆ ನೀಡುತ್ತಾಳೆ. ಅದನ್ನ ಸುಮಾರು ಜನರಿಗೆ ಕಳುಹಿಸಿದ್ದರು.

ಸ್ವಾಮೀಜಿಗಳ ನಡುವೆ ಮನಸ್ತಾಪ ಇರೋದು ಕಂಡುಬಂದಿದೆ. ನೀಲಾಂಬಿಕೆ ದೊಡ್ಡ ಬಳ್ಳಾಪುರದವರು ಎರಡನೇ ವರ್ಷದ ಇಂಜಿನಿಯರಿಂಗ್ ಓದುತ್ತಿದ್ದಾಳೆ. ಫೆಬ್ರವರಿಯಲ್ಲಿ ಪ್ಲಾನ್ ಮಾಡಿ, ಏಪ್ರಿಲ್‌ನಲ್ಲಿ ವಿಡಿಯೋ ಮಾಡಿದ್ದಾರೆ. ಮಾಹದೇವಯ್ಯ ಅನ್ನೋರು ತುಮಕೂರಿನವರು. ನಿವೃತ್ತ ಶಿಕ್ಷಕರಾಗಿದ್ದ ಅವರು ವಕೀಲರಾಗಿ ಕೆಲಸ ಮಾಡುತ್ತಿದ್ದರು ಎಂದು ಮಾಹಿತಿ ನೀಡಿದ್ದಾರೆ.

- Advertisement -

Related news

error: Content is protected !!