- Advertisement -
- Advertisement -
ಬದಿಯಡ್ಕ: ಇತ್ತೀಚಿಗಷ್ಟೇ ಕಾಸರಗೋಡು ಜಿಲ್ಲೆಯ ಬದಿಯಡ್ಕದ ದಂತ ವೈದ್ಯ ಡಾ. ಕೃಷ್ಣಮೂರ್ತಿಯವರ ಅನುಮಾನಾಸ್ಪದ ಸಾವಾಗಿದ್ದು, ಈ ಬಗ್ಗೆ ತೀವ್ರವಾದ ತನಿಖೆ ನಡೆಯುತ್ತಿದೆ.
ಇದೀಗ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ದಂತ ವೈದ್ಯರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ.
ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು ವೈದ್ಯೋ ನಾರಾಯಣ ಹರಿ ಎಂದು ಹೇಳ್ತೇವೆ ವೈದ್ಯರನ್ನು ದೇವರಂತೆ ಕಾಣ್ತೇವೆ. ಆದರೆ ಅಂತಹ ವೈದ್ಯರ ಕುಟುಂಬಕ್ಕೆ ಈ ರೀತಿಯ ನೋವಾಗಿದೆ. ಅದೇನೆ ಆಗಲಿ ಅವರ ಸಾವಿನ ಹಿಂದೆ ಇರುವ ಕಾರಣ ಶೀಘ್ರದಲ್ಲಿ ಪತ್ತೆಯಾಗಬೇಕು. ಅವರ ಕುಟುಂಬಕ್ಕೆ ನ್ಯಾಯ ದೊರೆಯಬೇಕು. ಮುಂದೆ ಇಂತಹ ಪ್ರಕರಣಗಳು ನಮ್ಮ ಸಮಾಜದಲ್ಲಿ ನಡಿಯಬಾರದು ಮತ್ತು ಇಂತಹ ಪ್ರಕರಣಗಳಿಗೆ ಯಾವುದೇ ರೀತಿಯ ಬೆಂಬಲ ಸಿಗಬರದು ಎಂದರು.
- Advertisement -