Friday, April 26, 2024
spot_imgspot_img
spot_imgspot_img

ಬಹರೈನ್ : ( ಜ.27) ಅಮ್ಮ ಕಲಾವಿದರು ಬಹರೈನ್ ಆಯೋಜಿಸುವ, ಕನ್ನಡ ಸಂಘ ಬಹರೈನ್ ಆಶ್ರಯದಲ್ಲಿ ಶ್ರೀ ಸತ್ಯನಾರಾಯಣ ‌ಪೂಜೆ

- Advertisement -G L Acharya panikkar
- Advertisement -

ಬಹರೈನ್: ಅಮ್ಮ ಕಲಾವಿದರು ಬಹರೈನ್ ಆಯೋಜಿಸುವ, ಕನ್ನಡ ಸಂಘ ಬಹರೈನ್ ಆಶ್ರಯದಲ್ಲಿ ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನದೊಂದಿಗೆ ವೇದಮೂರ್ತಿ ಶ್ರೀ ಸುಬ್ರಹ್ಮಣ್ಯ ಕುಮಾರ ಕಿಳಂಗಾರು ನಡುಮನೆ ಇವರ ಪೌರೋಹಿತ್ಯದಲ್ಲಿ ಶ್ರೀ ಸತ್ಯನಾರಾಯಣ ‌ಪೂಜೆಯು ಜನವರಿ 27 ರಂದು ಕನ್ನಡ ಭವನ ಬಹರೈನ್‌ನಲ್ಲಿ ನಡೆಯಲಿದೆ.

ಕಾರ್ಯಕ್ರಮದ ಮೆರುಗು ಏಕಕಾಲದಲ್ಲಿ ನಾಲ್ಕು ತಂಡದವರಿಂದ ಕುಣಿತ ಭಜನೆ ಮತ್ತು ಸ್ಯಾಕ್ಸೋಫೋನ್ ವಾದಕ ಡಾ ಪಿ.ಕೆ ದಾಮೋದರ್ ಪಡಿಬಾಗಿಲು ಮತ್ತು ಮಾಸ್ಟರ್ ಚಿಂತನ್ ಪುರುಷೋತ್ತಮ್ ಹಾಗೂ ತಮಿಳುನಾಡಿನ ಮನುರಾಜ್ ಇವರ ತವಿಲ್ವಾದನ ನಡೆಯಲಿದೆ. ರಾತ್ರಿ ಗಂಟೆ 8 ಕ್ಕೆ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!