ಪ್ರತಿಷ್ಠಿತ ರಾಜಕಾರಣಿಗೆ ಸೇರಿದ ಬಾರ್ನಲ್ಲಿ ಹುಡುಗಿಗಾಗಿ ರೌಡಿಶೀಟರ್ ಲಾಂಗ್ ಬೀಸಿದ ಘಟನೆ ನಡೆದ್ದಿದು, ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉತ್ತರ ಪ್ರದೇಶದ ಮೂಲದ ನಿವಾಸಿ ಅಸ್ಥಾಬ್ ಮತ್ತು ಮೀಷೋ ಇಬ್ಬರೂ ಪ್ರೇಮಿಗಳಾಗಿದ್ದು, ತನ್ನ ಪ್ರೇಯಾಸಿ ಮೀಷೋ ಹುಟ್ಟಿದ ಹಬ್ಬ ಹಿನ್ನಲೆ ಕೋರಮಂಗಲ ಬಳಿ ಪಾರ್ಟಿ ಮಾಡಲು ಬಂದಿದ್ದರು. ಜೊತೆಗೆ ಪಾರ್ಟಿಯಲ್ಲಿ ವಸೀಂ ಪಾಷಾ, ರೌಡಿ ಶೀಟರ್ಗಳಾದ ಸಂತೋಷ್ ಅಲಿಯಾಸ್ ರೋಸಿ , ರಾಮಾಂಜಿ ಬಂದಿದ್ದಾರೆ.
ಪಾರ್ಟಿ ನಡೆಸುತ್ತಿದ್ದ ವೇಳೆ ಎಣ್ಣೆ ಖಾಲಿಯಾಗಿದ್ದು, ಬಳಿಕ ರೌಡಿಶೀಟರ್ಗಳು ಒಂದು ಕೇಸ್ ಬಿಯರ್ ಖರೀದಿ ಮಾಡಲು ಎಂಆರ್ ಪಿ ಬಾರ್ಗೆ ಬಂದಿದ್ದ ವೇಳೆ ಯುವತಿ ಮಿಷೋ ಸಿಬ್ಬಂದಿಗಳಿಗೆ ಅಡ್ಡ ನಿಂತಿದ್ದಳು. ಇದನ್ನು ಕಂಡು ಸಿಬ್ಬಂದಿ ಸ್ವಲ್ಪ ಸೈಡ್ ಗೆ ಬನ್ನಿ ಅಂದಿದಕ್ಕೆ ಗ್ಯಾಂಗ್ ನ ನಡುವೆ ಕಿರಿಕ್ ಶುರುವಾಗಿದೆ.
ಸಿಬ್ಬಂದಿ ಮಾತಿಗೆ ಯುವತಿ ತಪ್ಪಾಗಿ ಅರ್ಥಸಿಕೊಂಡು ಬಾರ್ ಸಿಬ್ಬಂದಿಯ ಮೇಲೆ ಗರಂ ಆಗಿದ್ದಾಳೆ. ಎಣ್ಣೆ ನಶೆಯಲ್ಲಿದ್ದ ರೌಡಿಶೀಟರ್ ಸಂತೋಷ್ ಲಾಂಗ್ ತಂದು ಬಾರ್ ಸಿಬ್ಬಂದಿಗಳ ಮೇಲೆ ದರ್ಪ ತೋರಿಸಿ ಅಲ್ಲಿಯ ವಸ್ತುಗಳನ್ನು ಹಾನಿ ಮಾಡಿದ್ದು, ಅಲ್ಲದೇ ಬಾರ್ ನ ಸಿಬ್ಬಂದಿಗಳಾದ ಯಶ್ವಂತ್, ಪ್ರಸನ್ನ, ಮಂಜುನಾಥ್ ಮೇಲೆ ಹಲ್ಲೆ ನಡೆಸಿ ರೌಡಿಶೀಟರ್ಗಳು ಲಾಂಗ್ ಬೀಸಿ ದರ್ಪ ಮೆರೆದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.