Friday, May 17, 2024
spot_imgspot_img
spot_imgspot_img

ಬೆಳ್ತಂಗಡಿ: ಕತ್ತಿಯಿಂದ ಕಡಿದು ಪತಿಯನ್ನು ಕೊಲೆಗೈದ ಪತ್ನಿ

- Advertisement -G L Acharya panikkar
- Advertisement -

ಬೆಳ್ತಂಗಡಿ: ತಾಲೂಕಿನ ನಾವೂರು ಗ್ರಾಮದ ಅಬ್ಬನ್ ಕೆರೆ ಎಂಬಲ್ಲಿ ಪತ್ನಿಯೇ ಪತಿಯನ್ನು ಹತ್ಯೆಗೈದಿರುವ ಘಟನೆ ಮಂಗಳವಾರ (ಜು.5) ನಡೆದಿದೆ.

ನಾವೂರು ಗ್ರಾಮದ ಅರಣ್ಯ ಪ್ರವಾಸಿ ಮಂದಿರ ಬಳಿಯ ಅಬ್ಬನ್ ಕೆರೆ ಬಳಿ ದಂಪತಿಗಳು ವಾಸವಿದ್ದರು. ಬೇಬಿ(60) ಕೊಲೆಯಾದ ದುರ್ದೈವಿ. ಪತ್ನಿ ನೆಲ್ಲಮ್ಮ(55) ಆರೋಪಿ. ಕೊಲೆಯಾದ ಬಳಿಕ ಪತಿ ಬಳಿ ಪತ್ನಿ ಕತ್ತಿ ಹಿಡಿದು ಕುಳಿತಿದ್ದರು.

ಕೃಷಿಕ ದಂಪತಿಯಾಗಿರುವ ಇವರಿಗೆ ಮೂವರು ಮಕ್ಕಳಿದ್ದು, ಪುತ್ರಿಗೆ ವಿವಾಹವಾಗಿದ್ದು, ಓರ್ವ ಪುತ್ರ ವಿದೇಶದಲ್ಲಿ, ಮತ್ತೋರ್ವ ಪುತ್ರ ಬೇರೆಡೆ ವಾಸವಾಗಿದ್ದಾರೆ. ಮನೆಯಲ್ಲಿ ಇಬ್ಬರೇ ಇದ್ದರು ಎಂದು ತಿಳಿದುಬಂದಿದೆ.

ಪತ್ನಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಯಾವುದೋ ಕಾರಣಕ್ಕೆ ಪತಿಯನ್ನು ಕೊಲೆ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!