- Advertisement -
- Advertisement -
ಬೆಳ್ತಂಗಡಿ: ಕರ್ನಾಟಕ ಬ್ಯಾಂಕ್ ನ ಎ.ಟಿ.ಎಂನೊಳಗೆ ನುಗ್ಗಿದ ಕಳ್ಳರು, ಎ.ಟಿ.ಎಂನ 3 ಬ್ಯಾಟರಿಗಳನ್ನು ಎಗರಿಸಿ ಪರಾರಿಯಾದ ಘಟನೆ ಕಕ್ಕಿಂಜೆ ಪೇಟೆಯಲ್ಲಿ ನಡೆದಿದೆ.
ಆದ್ರೆ ನಿನ್ನೆ ರಾತ್ರಿ ದುಷ್ಕರ್ಮಿಗಳು ಕರ್ನಾಟಕ ಬ್ಯಾಂಕ್ ನ ಎಟಿಎಂನೊಳಗೆ ನುಗ್ಗಿ 3 ಬ್ಯಾಟರಿಗಳನ್ನು ಕದ್ದೊಯ್ದಿದ್ದಾರೆ ಎನ್ನಲಾಗಿದೆ. ಇನ್ನು ಕಳ್ಳರ ಈ ದುಷ್ಕೃತ್ಯ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇನ್ನು ಕಕ್ಕಿಂಜೆಯಲ್ಲಿರುವ ಕರ್ನಾಟಕ ಬ್ಯಾಂಕ್ ನ ಎಟಿಎಂನಲ್ಲಿ ಸೆಕ್ಯೂರಿಟಿ ಗಾರ್ಡ್ ವ್ಯವಸ್ಥೆಯಿಲ್ಲ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ಕಳ್ಳರ ಪತ್ತೆ ಕಾರ್ಯ ನಡೆಯುತ್ತಿದೆ.
- Advertisement -