Friday, May 3, 2024
spot_imgspot_img
spot_imgspot_img

ಬೆಳ್ತಂಗಡಿ: ಪುಂಜಾಲಕಟ್ಟೆ ಅಪಘಾತದಲ್ಲಿ ಮೃತಪಟ್ಟ ಯುವಕನನ್ನು ನೋಡಲು ಬರುತ್ತಿದ್ದ ಯುವಕನಿಗೆ ಟಿಪ್ಪರ್‌ ಡಿಕ್ಕಿ; ಸ್ಥಳದಲ್ಲಿಯೇ ಮೃತ್ಯು

- Advertisement -G L Acharya panikkar
- Advertisement -
astr

ಬೆಳ್ತಂಗಡಿ: ಪ್ರತ್ಯೇಕ ಬೈಕ್ ಅಪಘಾತದಲ್ಲಿ ಒಂದೇ ಕುಟುಂಬದ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

ಪುಂಜಾಲಕಟ್ಟೆ ಮೇಲಿನಪೇಟೆಯ ಶಾರದ ಮಂಟಪದ ಬಳಿ ಇಂದು ಬೆಳಗ್ಗೆ ಬೈಕ್ ಬೈಕ್ ನಡುವೆ ಅಪಘಾತ ನಡೆದು ಕಾಲೇಜ್ ವಿದ್ಯಾರ್ಥಿ ಕರಾಯದ ಮಹಮ್ಮದ್ ಶಫೀಕ್(20) ಸಾವನ್ನಪ್ಪಿದ್ದರು.

ಈ ವಿಚಾರ ತಿಳಿದ ಮೃತಪಟ್ಟ ಶಫೀಕ್ ಸಂಬಂಧಿ ಮಹಮ್ಮದ್ ಸಫಾನ್ (20) ಬೈಕ್ ನಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಬರುತ್ತಿದ್ದಾಗ ಕುಪ್ಪೆಟ್ಟಿಯ ಹುಣ್ಣೆಕಟ್ಟೆ ಪಿಲಿಗೂಡು ನಲ್ಲಿ ಟಿಪ್ಪರ್ ವಾಹನ ಡಿಕ್ಕಿ ಹೊಡೆದಿದೆ. ಈ ವೇಳೆ ಮಹಮ್ಮದ್ ಸಫಾನ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಪಘಾತದ ಬಳಿಕ ಟಿಪ್ಪರ್ ವಾಹನ ಚಾಲಕ ಟಿಪ್ಪರ್ ಸಹಿತ ಪರಾರಿಯಾಗಿದ್ದಾನೆ. ಮಹಮ್ಮದ್ ಸಫಾನ್ ತುಂಬೆ ಐಟಿಐ ವಿದ್ಯಾರ್ಥಿ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಪುತ್ತೂರು ಸಂಚಾರಿ ಪೊಲೀಸರು ಪರಿಶೀಲನೆ ನಡೆಸಿದ್ದು, ಟಿಪ್ಪರ್ ವಾಹನಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇನ್ನೂ ಘಟನಾ ಸ್ಥಳದಲ್ಲಿ ಜನ ಜಮಾಯಿಸಿದ್ದು ಪ್ರತಿಭಟನೆ ನಡೆಸುತ್ತಿದ್ದಾರೆ.

ಪುಂಜಾಲಕಟ್ಟೆ: ಬೈಕ್’ಗಳ ನಡುವೆ ಅಪಘಾತ; ವಿದ್ಯಾರ್ಥಿ ಸಾವು

- Advertisement -

Related news

error: Content is protected !!