ಬೆಳ್ತಂಗಡಿ: ಕಳೆದ ತಿಂಗಳು ಬೆಳ್ತಂಗಡಿ ತಾಲೂಕಿನ ಮುಗೇರಡ್ಕ ಎಂಬಲ್ಲಿ ಜನಾರ್ದನ ಗೌಡ ಎಂಬುವವರು ಮಾಜಿ ತಾಲೂಕು ಪಂಚಾಯತ್ನ ಅಧ್ಯಕ್ಷ ಚಂದಪ್ಪ ಪೂಜಾರಿರವರ ಮಗ ಮಹೇಶ್ ಪೂಜಾರಿ ಮತ್ತು ಅವರ 5 ವರ್ಷದ ಮಗನೊಂದಿಗೆ ಮೀನು ಹಿಡಿಯಲು ಹೋಗಿ ನೀರಿಗೆ ಬಿದ್ದು ಮೃತಪಟ್ಟಿದ್ದರು.
ಆದರೆ ಮರುದಿನ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಮಹೇಶ್ ಪೂಜಾರಿಯವರು ಜನಾರ್ದನ ಗೌಡರನ್ನು ಕೊಂದು ನೀರಿಗೆ ಹಾಕಿದ್ದಾರೆ ಎಂದು ಪ್ರಕರಣ ದಾಖಲಿಸುವಂತೆ ರಾಜಕೀಯ ಒತ್ತಡ ತಂದು ಮಹೇಶ್ ಪೂಜಾರಿ ಮೇಲೆ ಪ್ರಸ್ತುತ ಕೊಲೆ ಆರೋಪದಡಿ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ ಎಂದು ಮಹೇಶ್ ಪೂಜಾರಿ ಕುಟುಂಬ ಆರೋಪಿಸಿದೆ.
ಈ ಹಿನ್ನೆಲೆಯಲ್ಲಿ ಅಸಹಜ ಸಾವನ್ನು ಕೊಲೆ ಎಂದು ಅಪಪ್ರಚಾರ ನಡೆಸಿ ಪ್ರಕರಣ ದಾಖಲಿಸಲು ಷಡ್ಯಂತ್ರ ನಡೆಸಿದ ವ್ಯಕ್ತಿಗಳನ್ನು ಮುಗೇರಡ್ಕ ಕಾರಣಿಕ ಕ್ಷೇತ್ರದ ಮೂವರು ದೈವಗಳು ನೋಡಿಕೊಳ್ಳಲಿ ಎಂದು ಚಂದಪ್ಪ ಪೂಜಾರಿಯವರು ಮತ್ತು ಕುಟುಂಬಸ್ಥರು ಇತ್ತೀಚೆಗೆ ಕ್ಷೇತ್ರದಲ್ಲಿ ನಡೆದ ಸಂಕ್ರಮಣ ಪರ್ವದ ಸಂದರ್ಭದಲ್ಲಿ ಬೇಡಿಕೊಂಡರು.
ತನ್ನ ಮಗ ತಪ್ಪು ಮಾಡಿದ್ದರೆ ಆತನಿಗೆ ಶಿಕ್ಷೆಯಾಗಲಿ ,ಇಲ್ಲವೇ ಪ್ರಚಾರಕ್ಕಾಗಿ ರಾಜಕೀಯ ಪ್ರೇರಿತ ಶಿಕ್ಷೆಯಾದರೆ ಆ ವ್ಯಕ್ತಿಗೆ ಶಿಕ್ಷೆಯಾಗುವಂತಾಗಲಿ ಎಂದು ದೈವ ಬಲಿ ಮೊರೆ ಹೋಗಿದ್ದಾರೆ.