- Advertisement -
- Advertisement -
ಬೆಳ್ತಂಗಡಿ: ಮಳೆ ಸುರಿಯುತ್ತಿರುವ ಸಂದರ್ಭದಲ್ಲಿ ಜಲಪಾತ ವೀಕ್ಷಿಸುವುದೇ ಬಹು ಆನಂದ ಜಲಪಾತ ಪ್ರಿಯರೇ ಹೆಚ್ಚಿನವರು. ಆದರೆ ಅಂತವರಿಗೆ ಕಹಿ ಸುದ್ದಿಯೊಂದು ಹೊರಬಂದಿದೆ.
ಬೆಳ್ತಂಗಡಿ ತಾಲೂಕಿನಲ್ಲಿ ಕಳೆದ ಕೆಲವು ದಿನಗಳಿಂದ ವಿಪರೀತ ಮಳೆ ಸುರಿಯುತ್ತಿದ್ದು, ಇಲ್ಲಿನ ಎರ್ಮಾಯಿ, ಕಡಮ ಗುಂಡಿ, ಬಂಗಾರಪಲ್ಕೆ, ಬಂಡಾಜೆ ಎಳನೀರು ಸೇರಿದಂತೆ ಎಲ್ಲಾ ಜಲಪಾತಗಳು ಅಪಾಯಕಾರಿ ಮಟ್ಟದಲ್ಲಿ ಧುಮ್ಮಿಕ್ಕುತ್ತಿರುವ ಕಾರಣ, ಜಲಪಾತಗಳ ವೀಕ್ಷಣೆಗೆ ಪ್ರವಾಸಿಗರಿಗೆ ತಾತ್ಕಾಲಿಕ ನಿಷೇಧ ಹೇರಲಾಗಿದೆ ಎಂದು ಬೆಳ್ತಂಗಡಿ ವನ್ಯಜೀವಿ ವಲಯದ ಪ್ರಭಾರ ಆರ್.ಎಫ್.ಒ. ತ್ಯಾಗರಾಜ್ ತಿಳಿಸಿದ್ದಾರೆ.
- Advertisement -