Thursday, April 25, 2024
spot_imgspot_img
spot_imgspot_img

ಬೆಳ್ತಂಗಡಿ: ಹಗಲು ಹೊತ್ತಿನಲ್ಲಿ ಕಳ್ಳತನ- ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಮೂವರು ಆರೋಪಿಗಳನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು!

- Advertisement -G L Acharya panikkar
- Advertisement -

ಗುರುವಾಯನಕೆರೆ: ಉಪ್ಪಿನಂಗಡಿ ರಸ್ತೆ ಬಳಿಯ ಫ್ಯಾಬ್ರಿಕೇಶನ್ ಸಾಮಾಗ್ರಿಗಳ ಮಾರಾಟ ಅಂಗಡಿ ವಿನಾಯಕ ಏಜನ್ಸಿಯಿಂದ ಹಗಲು ಹೊತ್ತಿನಲ್ಲಿ ಕಳವು ನಡೆಸುತ್ತಿದ್ದ ಮೂರು ಮಂದಿ ರೆಡ್ ಹ್ಯಾಂಡ್ ಆಗಿ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದ ಘಟನೆ ನಡೆದಿದೆ.

ಸಂತೋಷ್ ಎಂಬವರ ಮಾಲಕತ್ವದ ಈ ಅಂಗಡಿಯಿಂದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯೋವ೯ ಸೇರಿದಂತೆ ಮೂರು ಮಂದಿಯನ್ನು ಹಿಡಿದು ಪೊಲೀಸ್ ರ ವಶಕ್ಕೆ ನೀಡಲಾಗಿದೆ.

ಸಿ.ಎ ಬ್ಯಾಂಕ್ ಇರುವ ಈ ಕಟ್ಟಡಕ್ಕೆ ರಾತ್ರಿ ಕಾವಲುಗಾರನಿದ್ದು, ಬೆಳಗ್ಗೆ 6 ಗಂಟೆಗೆ ಆತ ಡ್ಯೂಟಿ ಮುಗಿಸಿ ಹೋದ ಬಳಿಕ ಆರೋಪಿಗಳು ಈ ಕೃತ್ಯ ಎಸಗುತ್ತಿದ್ದರೆನ್ನಲಾಗಿದ್ದು , ಕಳೆದ ಮೂರು ತಿಂಗಳಿಂದ ಈ ರೀತಿ ಹಗಲು ಹೊತ್ತಿನಲ್ಲಿ ಕಳ್ಳತನ ಮಾಡುತ್ತಿದ್ದರೆಂದು ಹೇಳಲಾಗುತ್ತಿದೆ.

- Advertisement -

Related news

error: Content is protected !!