- Advertisement -
- Advertisement -
ಗುರುವಾಯನಕೆರೆ: ಉಪ್ಪಿನಂಗಡಿ ರಸ್ತೆ ಬಳಿಯ ಫ್ಯಾಬ್ರಿಕೇಶನ್ ಸಾಮಾಗ್ರಿಗಳ ಮಾರಾಟ ಅಂಗಡಿ ವಿನಾಯಕ ಏಜನ್ಸಿಯಿಂದ ಹಗಲು ಹೊತ್ತಿನಲ್ಲಿ ಕಳವು ನಡೆಸುತ್ತಿದ್ದ ಮೂರು ಮಂದಿ ರೆಡ್ ಹ್ಯಾಂಡ್ ಆಗಿ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದ ಘಟನೆ ನಡೆದಿದೆ.
ಸಂತೋಷ್ ಎಂಬವರ ಮಾಲಕತ್ವದ ಈ ಅಂಗಡಿಯಿಂದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯೋವ೯ ಸೇರಿದಂತೆ ಮೂರು ಮಂದಿಯನ್ನು ಹಿಡಿದು ಪೊಲೀಸ್ ರ ವಶಕ್ಕೆ ನೀಡಲಾಗಿದೆ.
ಸಿ.ಎ ಬ್ಯಾಂಕ್ ಇರುವ ಈ ಕಟ್ಟಡಕ್ಕೆ ರಾತ್ರಿ ಕಾವಲುಗಾರನಿದ್ದು, ಬೆಳಗ್ಗೆ 6 ಗಂಟೆಗೆ ಆತ ಡ್ಯೂಟಿ ಮುಗಿಸಿ ಹೋದ ಬಳಿಕ ಆರೋಪಿಗಳು ಈ ಕೃತ್ಯ ಎಸಗುತ್ತಿದ್ದರೆನ್ನಲಾಗಿದ್ದು , ಕಳೆದ ಮೂರು ತಿಂಗಳಿಂದ ಈ ರೀತಿ ಹಗಲು ಹೊತ್ತಿನಲ್ಲಿ ಕಳ್ಳತನ ಮಾಡುತ್ತಿದ್ದರೆಂದು ಹೇಳಲಾಗುತ್ತಿದೆ.
- Advertisement -