ಬೆಳ್ತಂಗಡಿ: ಹೆಂಡತಿ ತವರು ಮನೆಗೆ ಹೋಗಿದ್ದ ಸಂದರ್ಭದಲ್ಲಿ ಪತಿಯೊಬ್ಬ ಮನೆ ತೊರೆದು ನಾಪತ್ತೆಯಾದ ಘಟನೆ ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಸುನ್ನತ್ ಕೆರೆ ಎಂಬಲ್ಲಿಂದ ವರದಿಯಾಗಿದೆ.
ನಾಪತ್ತೆಯಾದ ವ್ಯಕ್ತಿ ಸಂಶುದ್ದೀನ್.ಪಿ(35) ಎನ್ನಲಾಗಿದೆ.
ಎರಡು ಗಂಡು ಮಕ್ಕಳೊಂದಿಗೆ ಸುನ್ನತ್ ಕೆರೆ ಎಂಬಲ್ಲಿ ವಾಸವಿರುವ ಸಂಶುದ್ದೀನ್ ಪಿ, ಸುಮಾರು ಎರಡು ತಿಂಗಳ ಹಿಂದೆ ಹೆಂಡತಿ ಫಾತಿಮ ತನ್ನ ತವರು ಮನೆಗೆ ಹೋಗಿದ್ದು ಪ್ರತಿ ದಿನ ಮೊಬೈಲ್ ನಲ್ಲಿ ಮಾತನಾಡಿಕೊಂಡಿದ್ದರು. ಡಿ.18ರಂದು ಗಂಡನು ಯಾವುದೇ ಕರೆ ಮಾಡದಿದ್ದಾಗ ಫಾತಿಮ ಅವರು ಗಂಡನಿಗೆ ಡಿ.19ರಂದು 9.00 ಗಂಟೆಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು.
ಸಂಶಯಗೊಂಡು ಗಂಡನ ಮನೆಯಾದ ಕುವೆಟ್ಟು ಗ್ರಾಮದ ಸುನ್ನತ್ ಕೆರೆಗೆ ಬಂದಾಗ ಮನೆಗೆ ಬೀಗ ಹಾಕಿರುವುದು ಕಂಡು ಬಂದಿದೆ. ಬೀಗ ತೆಗೆದು ಮನೆ ಒಳಗೆ ನೋಡಿದಾಗ ಮನೆಯಲ್ಲಿ ಕೆಲವು ವಸ್ತುಗಳು ಇಲ್ಲದೇ ಕಾಣೆಯಾಗಿದೆ.
ಅಲ್ಲದೇ ಸಂಶುದ್ದೀನನು ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿದ್ದು, ಇದುವರೆಗೆ ಫೋನ್ ಮಾಡದೇ, ವಾಪಾಸು ಮನೆಗೂ ಬಾರದೇ, ಸಂಬಂಧಿಕರ ಮನೆಗೂ ಹೋಗದೇ ನಾಪತ್ತೆಯಾಗಿರುತ್ತಾನೆ ಎಂದು ಪತ್ನಿ ಫಾತಿಮಾರವರು ಪೊಲೀಸರಿಗೆ ದೂರು ನೀಡಲಾಗಿದೆ.