Monday, May 6, 2024
spot_imgspot_img
spot_imgspot_img

ಬೈಕ್‌ ಅಪಘಾತ; ಯುವಕರಿಬ್ಬರು ಮೃತ್ಯು..!!

- Advertisement -G L Acharya panikkar
- Advertisement -
vtv vitla

ಕುಣಿಗಲ್: ಬೈಕ್ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಪಟ್ಟಣದ ರಾಜ್ಯ ಹೆದ್ದಾರಿ 33 ಚಿಕ್ಕಕರೆ ಸೇತುವೆ ಬಳಿ ತಡರಾತ್ರಿ ಸಂಭವಿಸಿದೆ.

ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿ ವಾಸಿ ಇಂಜಿನಿಯರ್ ಚೇತನ್( 28) ಕೋಟಿ ಪ್ರದೇಶದ ವಾಸಿ ಕಿರಣ್( 19) ಮೃತ ದುರ್ದೈವಿಗಳು.

ಚೇತನ್‌ ಹಾಗೂ ಕಿರಣ್ ಬೈಕ್ ನಲ್ಲಿ ಕುಣಿಗಲ್‌ ಪಟ್ಟಣದ ಮಾರ್ಗವಾಗಿ ಹುಲಿಯೂರು ದುರ್ಗ ಕಡೆ ಹೋಗುತ್ತಿರುವ ವೇಳೆ ಬೈಕ್‌ ಅಪಘಾತವಾಗಿದೆ ಎನ್ನಲಾಗಿದ್ದು, ಚೇತನ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಿರಣ್ ತೀವ್ರವಾಗಿ ಗಾಯಗೊಂಡು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಆದಿಚುಂಚನ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಬೆಳಗ್ಗೆ ಕೊನೆಯುಸಿದಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

- Advertisement -

Related news

error: Content is protected !!