- Advertisement -
- Advertisement -
ಹಲಗೂರು-ಕನಕಪುರ ಮುಖ್ಯ ರಸ್ತೆಯ ಸಾತನೂರಿನ ಕೆಮ್ಮಲ್ಲಿ ದೊಡ್ಡಿ ಗ್ರಾಮದ ಬಳಿ ಕೆಎಸ್ಸಾರ್ಟಿಸಿ ಬಸ್ ಮತ್ತು ಇನೋವಾ ಕಾರಿನ ನಡುವೆ ಶನಿವಾರ ಬೆಳಗ್ಗೆ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ.
ಉಡುಪಿ ಮೂಲದ ಅಕ್ಷತಾ, ಇವರ 6 ತಿಂಗಳ ಮಗು ಸುಮಂತ್ ಮತ್ತು ಡ್ರೈವರ್ ಉಮೇಶ್ ಮೃತ ದುರ್ದೈವಿಗಳು. ಇಬ್ಬರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಭೀಕರತೆ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಮಗು ಸುಮಂತ್ನ ಮುಖದ ಒಂದು ಭಾಗ ಬೇರ್ಪಟ್ಟಿದ್ದು, ರಸ್ತೆಯಲ್ಲೇ ಅಕ್ಷತಾ ಮತ್ತು ಮಗುವಿನ ಶವ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಡ್ರೈವರ್ ಕಾರಿನಲ್ಲೇ ಮೃತಪಟ್ಟಿದ್ದಾರೆ. ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಸಾತನೂರು ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.
- Advertisement -