Sunday, May 19, 2024
spot_imgspot_img
spot_imgspot_img

ಭೀಕರ ಅಪಘಾತಕ್ಕೆ ಉಡುಪಿ ಮೂಲದ ಮೂವರು ಸಾವು

- Advertisement -G L Acharya panikkar
- Advertisement -

ಹಲಗೂರು-ಕನಕಪುರ ಮುಖ್ಯ ರಸ್ತೆಯ ಸಾತನೂರಿನ ಕೆಮ್ಮಲ್ಲಿ ದೊಡ್ಡಿ ಗ್ರಾಮದ ಬಳಿ ಕೆಎಸ್ಸಾರ್ಟಿಸಿ ಬಸ್​ ಮತ್ತು ಇನೋವಾ ಕಾರಿನ ನಡುವೆ ಶನಿವಾರ ಬೆಳಗ್ಗೆ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ.

ಉಡುಪಿ ಮೂಲದ ಅಕ್ಷತಾ, ಇವರ 6 ತಿಂಗಳ ಮಗು ಸುಮಂತ್ ಮತ್ತು ಡ್ರೈವರ್ ಉಮೇಶ್ ಮೃತ ದುರ್ದೈವಿಗಳು. ಇಬ್ಬರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಭೀಕರತೆ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಮಗು ಸುಮಂತ್​ನ ಮುಖದ ಒಂದು ಭಾಗ ಬೇರ್ಪಟ್ಟಿದ್ದು, ರಸ್ತೆಯಲ್ಲೇ ಅಕ್ಷತಾ ಮತ್ತು ಮಗುವಿನ ಶವ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಡ್ರೈವರ್​ ಕಾರಿನಲ್ಲೇ ಮೃತಪಟ್ಟಿದ್ದಾರೆ. ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಸಾತನೂರು ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!