Saturday, April 20, 2024
spot_imgspot_img
spot_imgspot_img

ಮಂಗಳೂರು: ಅಕ್ರಮವಾಗಿ ಮರಳು ಸಾಗಾಟ: ಪ್ರಶ್ನಿಸಿದ ವ್ಯಕ್ತಿಗೆ ಟಿಪ್ಪರ್ ಡಿಕ್ಕಿ

- Advertisement -G L Acharya panikkar
- Advertisement -

ಮಂಗಳೂರು: ರಾತ್ರಿ ವೇಳೆಯಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದಾಗ ಪ್ರಶ್ನಿಸಲು ಬಂದ ವ್ಯಕ್ತಿಯ ಸ್ಕೂಟರ್ ಗೆ ಮರಳು ಸಾಗಾಟದ ಟಿಪ್ಪರ್ ಡಿಕ್ಕಿ ಹೊಡೆದ ಘಟನೆ ನಿನ್ನೆ ತಡರಾತ್ರಿ ಉಚ್ಚಿಲ ಗೇಟ್ ಎಂಬಲ್ಲಿ ನಡೆದಿದೆ.

ಮಂಗಳೂರು ಹೊರವಲಯದ ಉಚ್ಚಿಲ ಗೇಟ್ ಎಂಬಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದಾಗ ಪ್ರಶ್ನಿಸಲು ಬಂದ ವ್ಯಕ್ತಿಯ ಸ್ಕೂಟರ್ ಗೆ ಮರಳು ಸಾಗಾಟದ ಟಿಪ್ಪರ್ ಡಿಕ್ಕಿ ಹೊಡೆದಿದ್ದು, ಅಫಘಾತದಲ್ಲಿ ಕಿಶೋರ್ (52) ಗಂಭೀರ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ರೊಚ್ಚಿಗೆದ್ದ ಸಾರ್ವಜನಿಕರಿಂದ ಲಾರಿ ತಡೆದು ಪ್ರತಿಭಟನೆ ನಡೆದಿದೆ.

ಪೋಲೀಸರು ಅಕ್ರಮ ಮರಳು ಸಾಗಾಟದ ಪರ ವಹಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದು, ಸ್ಥಳಕ್ಕೆ ಆಗಮಿಸಿದ ಪೋಲೀಸರ ವಿರುದ್ಧವೂ ಸಾರ್ವಜನಿಕರು ತಿರುಗಿಬಿದ್ದಿದ್ದಾರೆ. ರಾತ್ರಿಯಿಂದ ಬೆಳಿಗ್ಗಿನವರೆಗೂ ಅಕ್ರಮ ಮರಳು ಸಾಗಾಟವಾಗುತ್ತಿದೆ. ಪೋಲೀಸರಿಗೆ ನಿರಂತರ ಮಾಹಿತಿ ನೀಡಿದರೂ ಯಾವ ಕ್ರಮವೂ ಆಗಿಲ್ಲ, ಪ್ರಶ್ನಿಸಿದವರ ಮೇಲೆ ಮರಳುದಂಧೆಕೋರರು ಹಲ್ಲೆಗೆ ಮುಂದಾಗುತ್ತಿದ್ದಾರೆ ಎಂದ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

Related news

error: Content is protected !!