- Advertisement -
- Advertisement -
ಪುತ್ತೂರು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಮಾಣಿಲ ಗ್ರಾಮದ ಹಲವು ಕಡೆಗಳಿಗೆ ಭೇಟಿ ನೀಡಿ ಮತಯಾಚನೆ ನಡೆಸಿದರು. ಬ್ರಹ್ಮ ಬೈದರ್ಕಳ ಗರಡಿ ದೈವಸ್ಥಾನ ಬಾಳೆಕಲ್ಲು, ಆದಿಶಕ್ತಿ ಮೊಗೇರ ದೈವಸ್ಥಾನ ಕಾಮಜಾಲು ತಾರಿದಳ, ವಿಷ್ಣುಮೂರ್ತಿ ದೇವಸ್ಥಾನ ದೇಲಂತಮಜಲು, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಬಿಜೆಪಿ ಪಕ್ಷದ ಮುಖಂಡರಾದ ಸುಬ್ರಾಯ ನಾಯಕ್, ವಾಸು ಪೂಜಾರಿ ಪಕಳಕುಂಜ, ರವಿಚಂದ್ರ ಪಕಳಕುಂಜರವರ ಮನೆಗೆ ಭೇಟಿ ನೀಡಿ ಮತಯಾಚನೆ ನಡೆಸಿದರು. ಈ ಸಂದರ್ಭದಲ್ಲಿ ಮಾಣಿಲ ಗ್ರಾ,ಮ ಪಂಚಾಯತ್ ಉಪಾಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಲ್ಲು ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
- Advertisement -