Saturday, April 20, 2024
spot_imgspot_img
spot_imgspot_img

ಮಂಗಳೂರು: ನಿಶ್ಚಿತಾರ್ಥವಾಗಿದ್ದ ಯುವತಿ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಯಶೋದಾ ಆಗಿ ಬದಲಾದ ಹಜರತ್ ಮಗಳು ರೇಶ್ಮಾ ಅಕ್ಬರ್ ಜತೆ ಪರಾರಿ

- Advertisement -G L Acharya panikkar
- Advertisement -

ಮಂಗಳೂರು: ಬಲ್ಲಾಳ್‌ಬಾಗ್‌ನಿಂದ ನಿಶ್ಚಿತಾರ್ಥವಾಗಿದ್ದ ಯುವತಿ ಚಿನ್ನಾಭರಣ ಹಾಗೂ ನಗದು ಸಹಿತ ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್‌ ಲವ್ ಜಿಹಾದ್ ಆರೋಪ ಮಾಡಿದ್ದು, ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

ಮೂಲತಃ ಗದಗ ನಿವಾಸಿಗಳಾಗಿದ್ದು, ಗಾಂಧಿನಗರ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದರು. ಅಪಾರ್ಟ್‌ಮೆಂಟ್‌ನಲ್ಲಿ ವಾಚ್‌ಮನ್ ಆಗಿರುವ ಯಶೋಧಾ ಎಂಬವರ ಪುತ್ರಿ ರೇಷ್ಮಾ(21) ನಾಪತ್ತೆಯಾಗಿರುವ ಯುವತಿ. ಆ. 21 ರಂದು ಆಕೆಯ ನಿಶ್ಚಿತಾರ್ಥ ನಡೆದಿತ್ತು. ಈ ವೇಳೆ ಹುಡುಗನ ಮನೆಯವರು ನೀಡಿದ ಚಿನ್ನಾಭರಣ ಸಮೇತ ಯುವತಿ ನಾಪತ್ತೆಯಾಗಿದ್ದಳು. ಆರೋಪಿಯನ್ನು ಬಂಧಿಸುವಂತೆ ವಿಹಿಂಪ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ಆಗ್ರಹಿಸಿದ್ದರು. ಅಲ್ಲದೆ, ಯಶೋಧ ಜತೆ ಬರ್ಕೆ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದರು.

ಇದೀಗ ಈ ಪ್ರಕರಣಕ್ಕೆ ಟ್ವಿಸ್ಟ್ ದೊರಕಿದೆ. ರೇಷ್ಮಾ ತಾಯಿ ಯಶೋಧ ಮೂಲತಃ ಮುಸ್ಲಿಂ ಸಮುದಾಯವರಾಗಿದ್ದರು. ರೇಶ್ಮಾ ತಾಯಿ ಮದುವೆ ಆಗಿ ಯಶೋದಾ ಆಗಿ ಬದಲಾಗಿದ್ದರು. ಹಜರತ್ ವೀರೇಶ್ ಎನ್ನುವವರನ್ನು ಮದುವೆ ಆದ ಬಳಿಕ ಯಶೋಧ ಆಗಿ ಬದಲಾಗಿದ್ದರು. ಇದೀಗ ಯಶೋಧ ಪುತ್ರಿ ರೇಷ್ಮಾ ನಾಪತ್ತೆಯಾಗಿದ್ದಾಳೆ. ಈ ಪ್ರಕರಣದ ಜಾಡು ಹಿಡಿದ ಬರ್ಕೆ ಠಾಣಾ ಪೊಲೀಸರು ನಾಪತ್ತೆಯಾಗಿರುವ ಯುವತಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ರೇಷ್ಮಾ ಅಕ್ಬರ್ ಜತೆ ಪರಾರಿಯಾಗಿದ್ದಾಳೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಅಕ್ಬರ್-ಹಾಜರ ಯಾನೆ ಯಶೋಧಳ ಅಕ್ಕನ ಮಗನಾಗಿದ್ದಾನೆ. ಗದಗದಲ್ಲಿ ರೇಷ್ಮಾ- ಅಕ್ಬರ್ ರಿಜಿಸ್ಟರ್ ಮ್ಯಾರೇಜ್ ಆಗಿರುವ ಬಗ್ಗೆ ಇದೀಗ ಮಾಹಿತಿ ಸಿಕ್ಕಿದೆ. ರೇಷ್ಮಾ ಇದೀಗ ಅಮ್ಮನ ಮೂಲಧರ್ಮಕ್ಕೆ ಸೇರಿದವನ ಮತ್ತು ಸಂಬಂಧಿಕ ಜತೆ ಮದುವೆ ಆಗಿದ್ದಾಳೆ ಎನ್ನುವ ಮಾಹಿತಿ ಇದ್ದು, ಯುವಕ-ಯುವತಿಯನ್ನು ಕರೆ ತರಲು ಬರ್ಕೆ ಪೊಲೀಸರು ಗದಗಕ್ಕೆ ತೆರಳಿದ್ದಾರೆ.

ಹೆಚ್ಚಿನ ಮಾಹಿತಿ ತನಿಖೆಯಿಂದ ತಿಳಿದುಬರಬೇಕಾಗಿದೆ.

driving
- Advertisement -

Related news

error: Content is protected !!