- Advertisement -
- Advertisement -
ಮಂಗಳೂರು: 2018ರ ಜನವರಿ 3ರಂದು ಮೊಬೈಲ್ ಕಂಪನಿಯೊಂದರ ಎಕ್ಸಿಕ್ಯೂಟಿವ್, ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಮಾಡಲಾಗಿತ್ತು. ಈ ಘಟನೆ ರಾಜ್ಯಾದ್ಯಂತ ಸಂಚಲ ಮೂಡಿಸಿತ್ತು. ದೀಪಕ್ ರಾವ್ ಹತ್ಯೆಯ ಪ್ರಮುಖ ಆರೋಪಿ ಪಿಂಕಿ ನವಾಝ್ ಈಗ ಮತ್ತೆ ಸುದ್ದಿಯಾಗಿದ್ದಾನೆ.
ದೀಪಕ್ ರಾವ್ ಹತ್ಯೆಯ ಸಾಕ್ಷಿಗಳಲ್ಲಿ ಒಂದಾಗಿರುವ ಕಾಟಿಪಳ್ಳ 3ನೇ ವಾರ್ಡ್ ಕಾರ್ಪೊರೇಟರ್ ಲೋಕೇಶ್ ಕುಲಾಲ್ ಬೊಳ್ಳಾಜೆಗೆ ಪಿಂಕಿ ನವಾಜ್ ಆವಾಜ್, ಬೆದರಿಕೆ ಹಾಕಿರುವ ಆಡಿಯೋ ವೈರಲ್ ಆಗಿದೆ. ದೀಪಕ್ ರಾವ್ ಕೊಲೆಯ ಪ್ರಧಾನ ಸಾಕ್ಷಿದಾರರನ್ನು ನೋಟ್ ಮಾಡಿ ಇಟ್ಟಿದ್ದೇವೆ ಎಂದು ವಾಟ್ಸ್ ಆಪ್ ಆಡಿಯೋದಲ್ಲಿ ಬಹಿರಂಗ ಹೇಳಿಕೆಯ ತುಣುಕುಗಳು ವೈರಲ್ ಆಗುತ್ತಿದೆ.
ಹೀಗಾಗಿ ಮತ್ತೆ ಮಂಗಳೂರಿನಲ್ಲಿ ನೆತ್ತರು ಹರಿಸುವ ಯೋಜನೆಗೆ ದುಷ್ಕರ್ಮಿಗಳು ಮುಂದಾಗಿದ್ದು ಪೊಲೀಸರು ಈ ಬಗ್ಗೆ ತನಿಖೆಯನ್ನು ಕೈಗೊಂಡಿದ್ದಾರೆ ಎಂದು ಬಲ್ಲಮೂಲಗಳು ತಿಳಿಸಿದೆ.
- Advertisement -