ಮಂಗಳೂರು: ತನ್ನ ಮೊಬೈಲ್ಗೆ ನಕಲಿ ಕರೆ ಮತ್ತು ಸಂದೇಶ ಬಂದಿರುವ ಬಗ್ಗೆ ತನಿಖೆ ನಡೆಸುವಂತೆ ಮಂಗಳೂರು ಕ್ಷೇತ್ರದ ಶಾಸಕ ಯು.ಟಿ ಖಾದರ್ ಅವರು ಮಂಗಳೂರು ನಗರ ಪೊಲೀಸ್ ಕಮಿಷನರ್ ಅವರಿಗೆ ದೂರು ನೀಡಿದ್ದಾರೆ.
ತಾನು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಮಾದ್ಯಾ ಹ್ನ 1.33ರ ಸುಮಾರಿಗೆ 7996664000 ಸಂಖ್ಯೆ ಯ ಮೊಬೈಲ್ನಿಂದ ಎರಡು ಬಾರಿ ಕರೆ ಬಂದಿದೆ. ಆದರೆ ಕರೆ ಸ್ವೀಕರಿಸಿರಲಿಲ್ಲ. ಬಳಿಕ ಸಭೆ ಮುಗಿಸಿ ಮೊಬೈಲ್ ನೋಡಿದಾಗ ‘Good afternoon this side Kaniskha Singh pa to sri rahul Gandhi ji call me’ ಎಂದು ಬರೆಯಲಾಗಿತ್ತು. ಈ ಮೊಬೈಲ್ ಸಂಖ್ಯೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಹೆಸರಿನಲ್ಲಿ ಸೇವ್ ಮಾಡಲಾಗಿತ್ತು.
ಟ್ರೂಕಾಲರ್ನಲ್ಲಿ ವೀಕ್ಷಿಸಿದಾಗ ಇದು ನಕಲಿ ಹೆಸರಿನಲ್ಲಿ ಬಂದ ಕರೆ ಎಂದು ಗೊತ್ತಾಗಿದೆ. ಆದರಿಂದ ಈ ಬಗ್ಗೆ ಕಾಲ್ ಮಾಡಿದವರು ಯಾರು ಮತ್ತು ಯಾಕಾಗಿ ಮಾಡಿದರು ಎಂದು ತಿಳಿಯಲು ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಯು ಟಿ ಖಾದರ್ ಅವರು ಕಮಿಷನರ್ ಅವರಿಗೆ ದೂರು ನೀಡಿದ್ದಾರೆ.