Friday, May 17, 2024
spot_imgspot_img
spot_imgspot_img

ಮಂಗಳೂರು: ಸುಲ್ತಾನ್ ಜ್ಯುವೆಲ್ಲರಿಯಲ್ಲಿ ಮುಸ್ಲಿಂ ಯುವಕನೊಂದಿಗೆ ಹಿಂದೂ ಯುವತಿ ಪತ್ತೆ; ಬಜರಂಗದಳ ಕಾರ್ಯಕರ್ತರ ದಾಳಿ

- Advertisement -G L Acharya panikkar
- Advertisement -

ಮಂಗಳೂರು: ಕಡಲನಗರಿ ಮಂಗಳೂರಿನಲ್ಲಿ ಮತ್ತೆ ಬಜರಂಗದಳ ಕಾರ್ಯಕರ್ತರ ಕೈಗೆ ಅನ್ಯಕೋಮಿನ ಜೋಡಿ ಸಿಕ್ಕಿದ್ದು, ಯುವಕನಿಗೆ ಹಿಗ್ಗಾಮುಗ್ಗ ಥಳಿಸಿದ ಘಟನೆ ಇಂದು ನಡೆದಿದೆ.

ಇಂತಹ ಅನ್ಯಕೋಮಿನ ಜೋಡಿಗಳು ಮಂಗಳೂರಿನಲ್ಲಿ ಪದೇ ಪದೇ ಪತ್ತೆಯಾಗುತ್ತಿವೆ ಹಾಗೂ ಲವ್ ಜಿಹಾದ್ ಪ್ರಕರಣಗಳು ಕೇಳಿಬರುತ್ತಿವೆ ಇದರ ನಡುವೆ ಇಂದು‌ ಕೂಡ ಜೋಡಿ ಪತ್ತೆಯಾಗಿದ್ದು ಬಜರಂಗದಳ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಹಿಂದು ಯುವತಿ ಮತ್ತು ಮುಸ್ಲಿಂ ಯುವಕ ನಗರದ ಸುಲ್ತಾನ್ ಜ್ಯುವೆಲ್ಲರಿನಲ್ಲಿ ಪತ್ತೆಯಾಗಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದ ಕಾರ್ಯಕರ್ತರು ಜ್ಯುವೆಲ್ಲರಿ ಒಳ ನುಗ್ಗಿ ಹಿಂದು ಯುವತಿ ಹಾಗೂ ಮುಸ್ಲಿಂ ಯುವಕನನ್ನ ಪ್ರಶ್ನಿಸಿದ್ದಾರೆ. ಬಳಿಕ ಜ್ಯುವೆಲ್ಲರಿ ಒಳ ಭಾಗದಲ್ಲೇ ಮುಸ್ಲಿಂ ಯುವಕನಿಗೆ ಥಳಿಸಿದ್ದಾರೆ ಎನ್ನಲಾಗಿದೆ.

ಜೋಡಿ ಪತ್ತೆಯಾದ ಬಳಿಕ ಯುವತಿಯ ಮನೆಯವರು ಬಂದು ಯುವಕನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದರ ನಡುವೆ ಏಕಾಏಕಿ ಬಜರಂಗದಳ ಕಾರ್ಯಕರ್ತರು ಯುವಕನ ಮೇಲೆ ಅಟ್ಯಾಕ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಕಳೆದ ಒಂದು ವಾರದ ಹಿಂದೆಯಷ್ಟೇ ಹಲವು ಇಂತಹ ಘಟನೆಗಳು ನಡೆದಿದ್ದು, ಬಜರಂಗದಳ ಕಾರ್ಯಕರ್ತರು ಹಿಂದು ಯುವತಿಯರ ತಂಟೆಗೆ ಬಂದ್ರೆ ಮೈಯತ್ ಮಾಡುವುದಾಗಿ ವಾರ್ನಿಂಗ್ ನೀಡಿದ್ದರು.

- Advertisement -

Related news

error: Content is protected !!