Monday, June 15, 2026
spot_imgspot_img
spot_imgspot_img

ಮಕ್ಕಳ ಕರ್ನಾಟಕ ರಾಜ್ಯೋತ್ಸವ ಗೌರವ -2021ರ ಪಟ್ಟಿ ಪ್ರಕಟ; ವಿಟ್ಲದ ಇಬ್ಬರು ಪುಟಾಣಿಗಳು ಆಯ್ಕೆ!

- Advertisement -
- Advertisement -

ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯು ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ನೀಡುವ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಗೌರವ -2021ಕ್ಕೆ ವಿವಿಧ ಜಿಲ್ಲೆಗಳ, ಹೊರನಾಡು ಮುಂಬಯಿ, ಕಾಸರಗೋಡು ಜಿಲ್ಲೆಗಳಿಗೆ ಸೇರಿದ ಒಟ್ಟು 30 ಮಂದಿಯನ್ನು ಆಯ್ಕೆ ಮಾಡಲಾಗಿದೆ.

ವಿಟ್ಲದ, ಚುಕ್ಕಿ ವಿಟ್ಲ ಹಾಗೂ ನಿರೀಕ್ಷಾ ವಿಟ್ಲ ಇಬ್ಬರು ಪುಟಾಣಿಗಳು ಆಯ್ಕೆಯಾಗಿದ್ದಾರೆ. ಹಾಗೂ ಪುತ್ತೂರಿನ ದೀಕ್ಷಾ ಡಿ.ರೈ ಪುತ್ತೂರು.

ನಿರೀಕ್ಷಾ ವಿಟ್ಲ ಚುಕ್ಕಿ ವಿಟ್ಲ

ಅರ್ಚನಾ ಎಸ್ ಕಡಬ, ಆತ್ಮ ಶೆಟ್ಟಿ ಉಪ್ಪಳ, ಋತ್ವ ಎಚ್.ಪಿ ಮಂಗಳೂರು, ಐಶ್ವರ್ಯ ಮೂಲ್ಯ ಮುಂಬಯಿ, ಚುಕ್ಕಿ ವಿಟ್ಲ, ತನುಶ್ರೀ ತುಮಕೂರು, ತನ್ವಿತಾ ಮೊಗವೀರ ಉಡುಪಿ, ದಿಯಾ ಆಳ್ವ ಮೂಡುಬಿದಿರೆ, ದೀಕ್ಷಾ ಡಿ.ರೈ ಪುತ್ತೂರು, ದೃತಿ ದಿನೇಶ ಪೂಜಾರಿ ಮುಂಬೈ, ಧೃತಿ ಎಸ್.ತೆಂಕನಿಡಿಯೂರು, ನಿರೀಕ್ಷಾ ವಿಟ್ಲ, ಪ್ರಣತಿ ಪಿ.ಹರಿತ್ಸಾ ಶ್ರವಣಬೆಳಗೊಳ, ಪ್ರಥಮ್ ಕಾಮತ್ ಕಟಪಾಡಿ, ಇದು ಮ್ಮಮೂರ್ತಿ ಕಡಂದಲೆ, ಭೂಮಿಕಾ ದಯಾನಂದ್ ಸಾಲಿಯಾನ್ ಮುಂಬೈ, ಮಾಣಿಕ್ ಸುವರ್ಣ ಕಟಪಾಡಿ, ಯೋಗ್ನ ಬಿ.ಅಮೀನ್ ಕುಳಾಯಿ, ಲಾರೆನ್ ಪಿಂಟೋ ಮಂಗಳೂರು, ವರ್ಷಿಣಿ ಆರ್ ಬೆಂಗಳೂರು, ಶರಣ್ಯ ಭಟ್ ಚೇಂಪಿ, ಶ್ರಜನ್ಯ ಜೆ.ಕೆ.ಬೆಳುವಾಯಿ, ಸಂಜಿತ್ ಎಂ.ದೇವಾಡಿಗ ಗಂಗೊಳ್ಳಿ, ಸಂದೇಶ ಕೆ.ಮಂಗಳೂರು, ಸನ್ವಿತ್ ಕುಲಾಲ್ ಮೂಡುಬಿದಿರೆ, ಸಮನ್ವಿತಾ ಗಣೇಶ್ ಅಣಂಗೂರು, ಸಮೃದ್ಧಿ ಕುಂದಾಪುರ, ಸುರಭಿ ಎನ್ ಶಿವಮೊಗ್ಗ, ಸಾನ್ನಿಧ್ಯ ಕವತ್ತಾರು ಕಿನ್ನಿಗೋಳಿ, ಅದಿನ್ ಎಸ್.ಉದನೆ ಆಯ್ಕೆಯಾಗಿದ್ದಾರೆ.

ಇದರಲ್ಲಿ 5 ಮಂದಿ ಹೊರನಾಡ ಕನ್ನಡಿಗರು, ಇಬ್ಬರು 5 ವರ್ಷದೊಳಗಿನ ಮಕ್ಕಳನ್ನು ಆಯ್ಕೆ ಮಾಡಲಾಗಿದೆ. ರಾಜ್ಯ ಮಟ್ಟದ ಈ ಗೌರವವನ್ನು ಧರ್ಮದರ್ಶಿ ಹರಿಕೃಷ್ಣ ಪುನರೂರು ನ.11ರಂದು ಮಧ್ಯಾಹ್ನ 2ಗಂಟೆಗೆ ಅಜೆಕಾರಿನಲ್ಲಿ ಪ್ರದಾನ ಮಾಡಲಿರುವರು ಎಂದು ಮಕ್ಕಳ ವಿಭಾಗದ ಸುನಿಧಿ ಅಜೆಕಾರು ತಿಳಿಸಿದ್ದಾರೆ.

- Advertisement -

Related news

error: Content is protected !!