Monday, May 6, 2024
spot_imgspot_img
spot_imgspot_img

ಮಗನಿಂದ ದೂರ ಉಳಿದ ಪೋಷಕರು; ಮನನೊಂದ ಬಿಇ ವಿದ್ಯಾರ್ಥಿ ಆತ್ಮಹತ್ಯೆ

- Advertisement -G L Acharya panikkar
- Advertisement -

ಮನನೊಂದ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ನಡೆದಿದೆ. ತಂದೆ-ತಾಯಿ ಬರಲಿಲ್ಲ ಎಂಬ ವಿಚಾರವೇ ಸಾವಿಗೆ ಮುಳುವಾಯಿತು ಎಂಬುವುದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ.

ಬನ್ನೇರುಘಟ್ಟ ಸಮೀಪದ ಎಎಂಸಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯೊಬ್ಬನ ಶವ ಕತ್ತು ಕೊಯ್ದುಕೊಂಡ‌ ಸ್ಥಿತಿಯಲ್ಲಿ ಹಾಸ್ಟೆಲ್​ನಲ್ಲಿ ಪತ್ತೆಯಾಗಿದೆ. ಕೇರಳದ ಕೋಳಿಕೋಡ್ ಜಿಲ್ಲೆಯ ಪದಿನಿ ಜರಿಯಾ ಗ್ರಾಮದ ನಿಧಿನ್ (19) ಮೃತ ದುರ್ದೈವಿ.

ಎಎಂಸಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಕಂಪ್ಯೂಟರ್ ಸೈನ್ಸ್ ಕೋರ್ಸಿಗೆ ಡಿ.1ರಂದು ಅಡ್ಮಿಶನ್​ ಪಡೆದಿದ್ದ. ಈ ವೇಳೆ ಈತನ ತಂದೆ-ತಾಯಿ ಬಂದಿರಲಿಲ್ಲವಂತೆ. ಸಹೋದರನ ಜತೆ ಬಂದು ಕಾಲೇಜಿಗೆ ದಾಖಲಾಗಿದ್ದ. ದುಬೈನಲ್ಲಿ ವಾಸವಿರುವ ತಂದೆ-ತಾಯಿಗೆ ಪದೇಪದೆ ಫೋನ್​ ಮಾಡುತ್ತಿದ್ದ ನಿಧಿನ್​, ಬರುವಂತೆ ಮನವಿ ಮಾಡುತ್ತಿದ್ದನಂತೆ. ತನ್ನಿಂದ ಅಪ್ಪ-ಅಮ್ಮ ದೂರವಿದ್ದಾರೆ ಎಂದು ಮನನೊಂದ ನಿಧಿನ್​, ಕಾಲ್​ ಮಾಡಿ ಜಗಳವನ್ನೂ ಮಾಡಿದ್ದನಂತೆ. ಇದೇ ವಿಚಾರಕ್ಕೆ ಮನನೊಂದು ಕತ್ತು ಕೊಯ್ದುಕೊಂಡು ಸತ್ತಿರುವ ಶಂಕೆ ವ್ಯಕ್ತವಾಗಿದೆ.

ಕಾಲೇಜಿನ ಕ್ಯಾಂಪಸ್ ಒಳಗಿನ ಹಾಸ್ಟೆಲ್​​ನಲ್ಲಿ ಸಹಪಾಠಿಯೊಬ್ಬರ ಜತೆ ರೂಂನಲ್ಲಿ ವಾಸವಿದ್ದ ನಿಧಿನ್​, ನಿನ್ನೆ (ಬುಧವಾರ) ಮಧ್ಯಾಹ್ನ ಹಾಸ್ಟೆಲ್ ಕೊಠಡಿಯ ಒಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದ. ಹಾಸ್ಟೆಲ್​ನ ಸಹಪಾಠಿ ಬಂದು ಬಾಗಿಲು ಬಡಿದರೂ ನಿಧಿನ್​, ತೆರೆದಿರಲಿಲ್ಲ.

ಈ ಬಗ್ಗೆ ಸಹಪಾಠಿ ಹಾಸ್ಟೆಲ್ ವಾರ್ಡನ್​ಗೆ ತಿಳಿಸಿದ್ದ. ವಾರ್ಡನ್ ಹಾಗೂ ಸಿಬ್ಬಂದಿ ಬಂದು ಬಾಗಿಲು ಒಡೆದು ಒಳ ಹೋಗಿ ನೋಡಿದಾಗ ಕತ್ತು ಕೊಯ್ದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಬನ್ನೇರುಘಟ್ಟ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!