Thursday, May 2, 2024
spot_imgspot_img
spot_imgspot_img

ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ಯುವತಿಯನ್ನು 18 ಬಾರಿ ಚಾಕುವಿನಿಂದ ಇರಿದ ಯುವಕ!

- Advertisement -G L Acharya panikkar
- Advertisement -

ಹೈದರಾಬಾದ್​: ಯುವತಿಯೊಬ್ಬಳು ಆಕೆಯ ಪ್ರಿಯಕರನಿಂದ ಬರ್ಬರವಾಗಿ ಹಲ್ಲೆಗೊಳಗಾಗಿದ್ದಾಳೆ. ಯುವತಿ ಆತನನ್ನು ಮದುವೆಯಾಗಲು ನಿರಾಕರಿಸಿದ್ದೇ ಈ ಹಲ್ಲೆಗೆ ಕಾರಣ ಎಂದು ಹೇಳಲಾಗಿದೆ. ಆದರೆ ಆಕೆಯ ಮೇಲೆ ಯುವಕ ಮಾಡಿದ ಹಲ್ಲೆಯ ಭೀಕರತೆ ನಿಜಕ್ಕೂ ಶಾಕ್​ ತರುವಂತಿದೆ. ಆ ವ್ಯಕ್ತಿ ಯುವತಿಗೆ ಬರೋಬ್ಬರಿ 18 ಬಾರಿ ಇರಿದಿದ್ದಾನೆ.

ಈ ಘಟನೆ ನಡೆದದ್ದು ಗ್ರೇಟರ್​ ಹೈದರಾಬಾದ್​ ವ್ಯಾಪ್ತಿಯ ಹಸ್ತಿನಾಪುರಂನಲ್ಲಿ. ಎಲ್​ಬಿ ನಗರ ಪೊಲೀಸ್​ ಠಾಣೆಯ ವ್ಯಾಪ್ತಿಯಲ್ಲಿ ಬರುವ ಈ ನಗರದಲ್ಲಿ ಬಾಡಿಗೆ ರೂಂನಲ್ಲಿ ಆಕೆ ವಾಸವಾಗಿದ್ದಳು. ಯುವತಿಯ ಹೆಸರು ಶಿರೀಷಾ. ಆರೋಪಿ ಬಸವರಾಜ್​. ಇವರಿಬ್ಬರೂ ವಿಕಾರಾಬಾದ್​ ಜಿಲ್ಲೆಯ ದೌಲತಾಬಾದ್​​ ನಿವಾಸಿಗಳಾಗಿದ್ದು, ಕಳೆದ ಕೆಲವು ವರ್ಷಗಳಿಂದಲೂ ರಿಲೇಶನ್​ಶಿಪ್​​ನಲ್ಲಿ ಇದ್ದರು.

ಆದರೆ ಎರಡು ತಿಂಗಳಿಂದ ಶಿರೀಷಾ ಬೇರೊಬ್ಬನ ಸಂಘ ಮಾಡಿದ್ದೇ ಬಸವರಾಜ್​ ಕೋಪಕ್ಕೆ ಕಾರಣ. ಶಿರೀಷಾ ಇತ್ತೀಚೆಗೆ ಶ್ರೀಧರ್​ ಎಂಬುವನೊಂದಿಗೆ ತುಂಬ ಕ್ಲೋಸ್​ ಆಗಿದ್ದಳು. ಹೀಗಾಗಿ ಬಸವರಾಜ್​ನನ್ನು ಮದುವೆಯಾಗುವುದಿಲ್ಲ ಎನ್ನುತ್ತಿದ್ದಳು. ಇದೇ ಕಾರಣಕ್ಕೆ ಕೋಪಗೊಂಡ ಬಸವರಾಜ್​ ಶಿರೀಷಾಳಿಗೆ 18 ಬಾರಿ ಚಾಕುವಿನಿಂದ ಇರಿದಿದ್ದಾನೆ. ಆಕೆಯೀಗ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ. ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.

- Advertisement -

Related news

error: Content is protected !!