Friday, March 29, 2024
spot_imgspot_img
spot_imgspot_img

ಪ್ರವಾಹಕ್ಕೆ ಸಿಲುಕಿದ ವ್ಯಕ್ತಿಯನ್ನುರಕ್ಷಿಸಿದ ವಾಯುಪಡೆ. ಹೆಲಿಕಾಫ್ಟರ್ ಮೂಲಕ ರಕ್ಷಿಸಿದ ರೋಚಕ ವಿಡಿಯೋ ವೈರಲ್..!

- Advertisement -G L Acharya panikkar
- Advertisement -

ಛತ್ತೀಸ್ ಗಡ : ಅಣೆಕಟ್ಟಿನಿಂದ ಹೊರ ಬಿಟ್ಟ ನೀರಿಗೆ ಜಿಗಿದ ವ್ಯಕ್ತಿಯೊಬ್ಬ, ನೀರಿನಿಂದ ದಡಕ್ಕೆ ಬರಲಾಗದೆ ಭಾರತೀಯ ವಾಯುಪಡೆಯ ಹೆಲಿಕಾಫ್ಟರ್ ಮೂಲಕ ರಕ್ಷಿಸಿದ ರೋಚಕ ವಿಡಿಯೋ ಈಗ ವೈರಲ್ ಆಗಿದೆ.ಛತ್ತೀಸ್​ಗಢದಲ್ಲಿ ಬಿಲಾಸ್​ ಪ್ಪುರ ಸಮೀಪ ಪ್ರವಾಸಿ ತಾಣವಾದ ಖುತಘಾಟ್ ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದ್ದು ಹೆಚ್ಚಿನ ನೀರನ್ನು ಹೊರಕ್ಕೆ ಬಿಡಲಾಗಿದೆ ಈ ಸಂದರ್ಭ ಸ್ಥಳದಲ್ಲಿ ನೆರೆದಿದ್ದ ಪ್ರವಾಸಿಗರಲ್ಲಿ ಓರ್ವ ನೀರಿಗೆ ಜಿಗಿದಿದ್ದಾನೆ ಆದರೆ ಆತನಿಗೆ ಈಜಿ ದಡ ಸೇರಲು ಸಾಧ್ಯವಾಗದೆ ಪಕ್ಕದಲ್ಲಿದ್ದ ಮರದ ಕೊಂಬೆಯನ್ನು ಹಿಡಿದು ಸಹಾಯಕ್ಕಾಗಿ ಅಂಗಲಾಚಿದ್ದಾನೆ.

ಕೂಡಲೇ ಪೊಲೀಸ್ ಅಧಿಕಾರಿಗಳು ವ್ಯಕ್ತಿಯ ರಕ್ಷಣೆಗಾಗಿ ಭಾರತೀಯ ವಾಯುಸೇನೆಯ ನೆರವನ್ನು ಕೇಳಿಕೊಂಡಿದ್ದಾರೆ ಆದರೆ ಪ್ರತಿಕೂಲ ಹವಾಮಾನ ಇರದ ಪರಿಣಾಮ ಸೋಮವಾರ ಮುಂಜಾನೆ ರಕ್ಷಣಾ ಕಾರ್ಯ ಕೈಗೆತ್ತಿಕೊಳ್ಳಲಾಯಿತು.ಸೋಮವಾರ ಬೆಳಿಗ್ಗೆ ವಾಯುಪಡೆಯ ಅಧಿಕಾರಿಗಳು ಮರದ ಸಹಾಯದಿಂದ ವ್ಯಕ್ತಿಯನ್ನು ಹೆಲಿಕಾಪ್ಟಾರ್ ಸಹಾಯದೊಂದಿಗೆ ರಕ್ಷಣೆ ಮಾಡಿದ್ದಾರೆ.

ಭಾರತೀಯ ವಾಯುಪಡೆ ಹೆಲಿಕಾಫ್ಟರ್ ಮೂಲಕ ರಕ್ಷಿಸುವ ಕಾರ್ಯಾಚರಣೆಯನ್ನು ಬಿಲಾಸಪುರ ಪೊಲೀಸರು ಚಿತ್ರೀಕರಿಸಿದ್ದು ಸಾಮಾಜಿಕ ಜಾಲಾತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಕಾರ್ಯಾಚರಣೆ ಮೈನವಿರೇಳಿಸುವಂತೆ ಇದ್ದು, ಬಹಳ ಜನ ವಾಯುಪಡೆ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

- Advertisement -

Related news

error: Content is protected !!