ಮೈಸೂರು: ಪೊಲೀಸ್ ಸಿಬ್ಬಂದಿಯೋರ್ವ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸ0ಪರ್ಕ ಬೆಳೆಸಿ ಬಳಿಕ ಯುವತಿಗೆ ಕೈ ಕೊಟ್ಟ ಘಟನೆ ಮೈಸೂರಿನಲ್ಲಿ ನಡೆದಿದ್ದು, ಇದೀಗ ಪೊಲೀಸಪ್ಪನಿಂದ ನೊಂದು ಯುವತಿ ಪೊಲೀಸ್ ಠಾಣೆಯ ಎದುರು ಕುಳಿತು ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾಳೆ.
ವಂಚನೆಗೆ ಒಳಗಾದ ಯುವತಿ ಬೆಂಗಳೂರಿನ ಕದ್ರೇನಹಳ್ಳಿ ನಿವಾಸಿ ಹೆಸರು ಸವಿತಾ ಎನ್ನಲಾಗಿದೆ.
ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ರವಿ, ತನಗೆ ಅನ್ಯಾಯ ಮಾಡಿದ್ದಾನೆ ಅಂತ ಆರೋಪಿಸಿ ಯುವತಿ ಠಾಣೆ ಎದುರೇ ಪ್ರತಿಭಟನೆ ಮಾಡಿದ್ದಾಳೆ.
2018ರಲ್ಲಿ ಫೇಸ್ ಬುಕ್ ಮೂಲಕ ಪರಿಚಿತನಾದ ರವಿ ನನ್ನನ್ನ ಮದುವೆ ಆಗ್ತೀನಿ ಅಂತ ನಂಬಿಸಿದ್ದ. ಅಲ್ಲದೆ ನನ್ನೊಂದಿಗೆ ದೈಹಿಕ ಸ0ಪರ್ಕ ಬೆಳೆಸಿ ನನ್ನನ್ನ ಬಳಸಿಕೊಂಡು ಈಗ ನಡುನೀರಲ್ಲಿ ಕೈ ಬಿಟ್ಟಿದ್ದಾನೆ ಅಂತಾ ಯುವತಿ ಆರೋಪಿಸಿದ್ದಾಳೆ.
ಆರಂಭದಲ್ಲಿ ಚೆನ್ನಾಗಿದ್ದ ರವಿ, ಈಗ ಮತ್ತೊಂದು ಹುಡುಗಿಯೊಂದಿಗೆ ಮದುವೆಗೆ ತಯಾರಿ ನಡೆಸಿದ್ದಾನೆ. ಆತ ನನ್ನನ್ನ ಮದುವೆ ಆಗಬೇಕು ಎಂದು ಪಟ್ಟು ಹಿಡಿದಿದ್ದಾಳೆ. ಆದರೆ, ಇಷ್ಟೆಲ್ಲ ಹೈಡ್ರಾಮ ಸೃಷ್ಠಿಸಿದ ಯುವತಿ ದೂರು ಕೊಡಲು ಮಾತ್ರ ನಿರಾಕರಿಸಿದ್ದಾಳೆ.
ಈ ವಿಚಾರ ಖುದ್ದು ಹಿರಿಯ ಅಧಿಕಾರಿಗಳಿಗೆ ಮೌಖಿಕವಾಗಿ ತಿಳಿಸಲು ಹಿಂದೇಟು ಹಾಕಿದ್ದಾಳೆ. ಇದರಿಂದ ಯಾವುದೇ ದೂರು ದಾಖಲಾಗದೆ ಕೇವಲ ಆರೋಪ ಮಾತ್ರ ಮಾಧ್ಯಮಗಳ ಮೂಲಕ ದಾಖಲಾಗಿದೆ. ಆದ್ರೇ, ಇತ್ತ, ಆರೋಪಿ ಪೇದೆ ರವಿ ಮಾತ್ರ ನನಗೇನೂ ಗೊತ್ತೇ ಇಲ್ಲ, ನಾನವನಲ್ಲ ಎಂಬಂತೆ ಮೌನವಾಗಿದ್ದಾನೆ ಎನ್ನಲಾಗಿದೆ. ಒಟ್ಟಿನಲ್ಲಿ ಇಷ್ಟು ದೊಡ್ಡ ಆರೋಪ ಮಾಡಿದರೂ, ಠಾಣೆ ಮೆಟ್ಟಿಲ ಬಳಿ ಬಂದರೂ ದೂರು ದಾಖಲಾಗದೆ ಇರೋದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.