Friday, April 26, 2024
spot_imgspot_img
spot_imgspot_img

ಬೆಂಕಿ ಹಚ್ಚಿಕೊಂಡು ಮಹಿಳೆ ಆತ್ಮಹತ್ಯೆ; ಇದೇ ವೇಳೆ ಪುತ್ರಿಗೂ ಬೆಂಕಿ ತಗುಲಿ ದಾರುಣ ಸಾವು..!

- Advertisement -G L Acharya panikkar
- Advertisement -
vtv vitla
vtv vitla

ರಾಯಚೂರು: ಜಿಲ್ಲೆಯ ಸಿರವಾರ ಪಟ್ಟಣದಲ್ಲಿ ಬೆಂಕಿ ಹಚ್ಚಿಕೊಂಡು ಗೃಹಿಣಿ ಆತ್ಯಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಘಟನೆ ವೇಳೆ ಪಕ್ಕದಲ್ಲಿದ್ದ ಪುತ್ರಿಗೂ ಬೆಂಕಿ ತಗಲಿದ್ದು ಮಗಳು ಕೂಡ ಮೃತಪಟ್ಟಿದ್ದಾರೆ.

ಮೃತರನ್ನು ಪಟ್ಟಣದ ಖಾಸಗಿ ಸಹಕಾರಿ ಪತ್ತಿನ ಸಂಘದ ಉದ್ಯೋಗಿಯಾಗಿದ್ದ ಶಿರೀಷಾ(32) ಅವರು ಪುತ್ರಿ ಭುವನಾ(5) ಮನೆಯಲ್ಲಿಯೇ ಬೆಂಕಿಯಲ್ಲಿ ಸಜೀವ ದಹನವಾಗಿದ್ದಾರೆ.

ಮಹಿಳೆಯ ಆಂಧ್ರಪ್ರದೇಶದ ಆದೋನಿಯವರು ರಾಯಚೂರಿನಿಂದ ವಿವಾಹವಾಗಿದ್ದರು. ಇನ್ನೊಬ್ಬ ಪುತ್ರಿಯನ್ನು ಶಾಲೆಗೆ ಬಿಟ್ಟು ಬರುವುದಕ್ಕೆ ಪತಿ ಹೊರ ಹೋಗಿದ್ದರು ಎನ್ನಲಾಗಿದೆ. ಪತಿ ಹೊರಗೆ ಹೋಗಿದ್ದಾಗ ಶಿರೀಷ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೈಯಕ್ತಿಕ ಕಾರಣದಿಂದ ಶಿರೀಷ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಘಟನೆ ಬಗ್ಗೆ ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!