- Advertisement -
- Advertisement -
ತನ್ನ ಮನೆ ಬಾಗಿಲಿಗೆ ಬಂದ ಬಿಜೆಪಿ ಜಿಲ್ಲಾಧ್ಯಕ್ಷರನ್ನು ಹಾಗೂ ಬಿಜೆಪಿ ಮುಖಂಡರನ್ನು ಮನೆ ಬಾಗಿಲಿನಿಂದ ತೆರವುಗೊಳಿಸಿ ಅವಮಾನಿಸಿದ ಘಟನೆ ಶಾಸಕ ಸಂಜೀವ ಮಠಂದೂರು ಮನೆಯಲ್ಲಿ ನಡೆದಿದೆ.
BJP ಜಿಲ್ಲಾಧ್ಯಕ್ಷ ಸುದರ್ಶನ್ , ಪಕ್ಷದ ಮುಖಂಡರಾದ ಅಪ್ಪಯ್ಯ ಮಣಿಯಾಣಿ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ರಾಧಕೃಷ್ಣ ಬುಡಿಯಾರ್, ಚಂದ್ರಶೇಖರ್ ಬಪ್ಪಳಿಗೆ ಸೇರಿದಂತೆ ಹಲವು ಬಿಜೆಪಿ ಮುಖಂಡರು ಇಂದು ಶಾಸಕ ಸಂಜೀವ ಮಠಂದೂರುರವರ ಮನೆಗೆ ಭೇಟಿ ನೀಡಿದ್ದು ಈ ವೇಳೆ ಪುತ್ತೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ವಂಚಿತ ಶಾಸಕ ಸಂಜೀವ ಮಠಂದೂರು ಹಾಗೂ ಅವರ ಗ್ಯಾಂಗ್ ನವರು ಬಿಜೆಪಿ ಜಿಲ್ಲಾಧ್ಯಕ್ಷರ ಸಹಿತ ಬಿಜೆಪಿ ಮುಖಂಡರಿಗೆ ಗೆರಾವ್ ಹಾಕಿ ಅವಮಾನಿಸಿದ್ದಾರೆ. ಇದೀಗ ಈ ಘಟನೆ ಬಿಜೆಪಿ ಜಿಲ್ಲಾಧ್ಯಕ್ಸರು, ಬಿಜೆಪಿ ಮುಖಂಡರಲ್ಲಿ ಅಸಮಾಧಾನ ವ್ಯಕ್ತವಾಗಿದ್ದು ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
- Advertisement -