Thursday, May 9, 2024
spot_imgspot_img
spot_imgspot_img

ಮರು ಮೌಲ್ಯಮಾಪನದಲ್ಲಿ ಹೆಚ್ಚುವರಿ ಅಂಕ ಗಳಿಸಿದ ವಿಠ್ಠಲ್ ಜೇಸಿಸ್ ಶಾಲೆಯ ವಿದ್ಯಾರ್ಥಿನಿಯರು

- Advertisement -G L Acharya panikkar
- Advertisement -

2022 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶದ ಮರುಮೌಲ್ಯಮಾಪನದಲ್ಲಿ ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಈ ಕೆಳಗಿನ ವಿದ್ಯಾರ್ಥಿಗಳು ಹೆಚ್ಚುವರಿ ಅಂಕಗಳನ್ನು ಪಡೆದಿರುತ್ತಾರೆ.

ಕುಮಾರಿ ಹರ್ಷ ಎಸ್ ಇವರಿಗೆ ಮರುಮೌಲ್ಯಮಾಪನದಲ್ಲಿ ಸಮಾಜವಿಜ್ಞಾನ ವಿಷಯದಲ್ಲಿ ಮೊದಲ ಅಂಕವು 98 ಆಗಿದ್ದು ಇದೀಗ 2 ಅಂಕ ಸೇರ್ಪಡೆಯಾಗಿ ಒಟ್ಟು 100 ಅಂಕ ಗಳಿಸಿ
625 ಕ್ಕೆ 624 ಅಂಕಗಳನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ . ಇವರು ಸಾಂತಪದವು ಶ್ರೀಕೃಷ್ಣ ಭಟ್ ಎಸ್ ಮತ್ತು ಜಯಶ್ರೀ ಕೆ ಆರ್ ರವರ ಪುತ್ರಿಯಾಗಿರುತ್ತಾರೆ.

ಹಾಗೆಯೇ ಕುಮಾರಿ ಅಪೂರ್ವ ಭಟ್ ಡಿ ಇವರು
ಹಿಂದಿ ಯಲ್ಲಿ 2 ಮತ್ತು ಗಣಿತದಲ್ಲಿ 1 ಹೆಚ್ಚುವರಿ ಅಂಕ ಪಡೆದು ಮರುಮೌಲ್ಯಮಾಪನದಲ್ಲಿ 624 ಅಂಕವನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಂತಾಗಿದೆ. ಇವರು ಹೆಗ್ಡೆಕೂಡಿ ರಾಜೇಶ್ ಡಿ ಮತ್ತು ಸೌಮ್ಯ ರವರ ಪುತ್ರಿಯಾಗಿರುತ್ತಾರೆ.

ಕುಮಾರಿ ಖಾತೀಜತ್ ರಹಿಲ ಇವರಿಗೆ 605 ಅಂಕಗಳಿದ್ದು ಮರು ಮೌಲ್ಯಮಾಪನದಲ್ಲಿ ಕನ್ನಡ ವಿಷಯದಲ್ಲಿ 4 ಅಂಕ ಹೆಚ್ಚುವರಿ ಪಡೆದು ಒಟ್ಟು 609 ಅಂಕ ಪಡೆದಿರುತ್ತಾರೆ. ಇವರು ದೇಲಂತಬೆಟ್ಟು ಅಬ್ದುಲ್ ರೆಹಿಮಾನ್ ಡಿ ಬಿ ಮತ್ತು ಜಮೀಲ ರವರ ಪುತ್ರಿಯಾಗಿರುತ್ತಾರೆ.

ಕುಮಾರಿ ಮೇಘಶ್ರೀ ಇವರು ಮೊದಲ ಮೌಲ್ಯಮಾಪನದಲ್ಲಿ 598 ಅಂಕ ಪಡೆದಿದ್ದು ಮರು ಮೌಲ್ಯಮಾಪನದಲ್ಲಿ ವಿಜ್ಞಾನ ವಿಷಯದಲ್ಲಿ 2 ಅಂಕದ ಸೇರ್ಪಡೆಯೊಂದಿಗೆ ಒಟ್ಟು 600 ಅಂಕ ಪಡೆದಿರುತ್ತಾರೆ. ಇವರು ಅಡ್ಕಸ್ಥಳ ರಘು ಮತ್ತು ಬಿಂದು ರವರ ಪುತ್ರಿಯಾಗಿರುತ್ತಾರೆ.

ಇವರ ಸಾಧನೆಯನ್ನು ಪ್ರಶಂಶಿಸಿ ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಆಡಳಿತ ಮಂಡಳಿ, ಆಡಳಿತಾಧಿಕಾರಿ, ಪ್ರಾಂಶುಪಾಲರು, ಉಪ ಪ್ರಾಂಶುಪಾಲೆಯರು ಮತ್ತು ಎಲ್ಲಾ ಶಿಕ್ಷಕ -ಶಿಕ್ಷಕೇತರ ವೃಂದವು ಅಭಿನಂದನೆಯನ್ನು ಸಲ್ಲಿಸಿದೆ.

- Advertisement -

Related news

error: Content is protected !!