ಮಾಣಿ: ಬಾನೊಟ್ಟು ಶ್ರೀ ಉಮಾಮಹೇಶ್ವರ ದೇವರ ಸಾನಿದ್ಯದ ಜೀರ್ಣೋದ್ಧಾರ ಕುರಿತು ಧರ್ಮಜಾಗೃತಿ ಅಭಿಯಾನ ಅಂಗವಾಗಿ ಅಖಂಡ ಏಕಾಹ ಭಜನೆ ಏ. 8 ರ ಸೂರ್ಯೋದಯದಿಂದ ಏ 9ರ ಸೂರ್ಯೋದಯದವರೆಗೆ ನಡೆಯಿತು.
ಎಪ್ರಿಲ್ 8 ನೇ ಶನಿವಾರ ಸೂರ್ಯೋದಯದಿಂದ ಎಪ್ರಿಲ್ 9ನೇ ಆದಿತ್ಯವಾರ ಸೂರ್ಯೋದಯದವರೆಗೆ , ಕ್ಷೇತ್ರ ಅಭಿವೃದ್ಧಿ ಸಮಿತಿ ಹಾಗೂ ಊರ ಹತ್ತು ಸಮಸ್ತರ ಮತ್ತು ಊರ- ಪರವೂರಿನ ವಿವಿಧ ಭಜನಾ ಮಂಡಳಿಗಳ ಸಮ್ಮಿಲನದಲ್ಲಿ ಅಖಂಡ ಏಕಾಹ ಭಜನೆ ಕಾರ್ಯಕ್ರಮ ನಡೆಯಿತು.
ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಗಮಿಸಿದ್ದರು. ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ಕ್ಷೇತ್ರ ಅಭಿವೃದ್ಧಿ ಸಮಿತಿ ಗೌರವ ಅಧ್ಯಕ್ಷ ಮಾಣಿಗುತ್ತು ಸಚಿನ್ ರೈ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನಾರಾಯಣ ರೈ ಕೊಡಾಜೆ, ಕ್ಷೇತ್ರ ಅಭಿವೃದ್ಧಿ ಸಮಿತಿಯ ಸದಸ್ಯ ದಿನಕರ ನಾಯಕ್ ನೇರಳಕಟ್ಟೆ, ರಾಮಕೃಷ್ಣ ಆಳ್ವ, ಗಿರಿಯಪ್ಪ ಪೂಜಾರಿ, ವೆಂಕಟರಮಣ ಪೈ, ಹರೀಶ್ ಮಾಣಿ, ನರಸಿಂಹ ಶೆಟ್ಟಿ, ಜನಾರ್ದನ ಪೂಜಾರಿ, ನಿತಿನ್ ಸಾಲ್ಯಾನ್, ಜಯ ಕುಲಾಲ್, ಭಾರತೀ ವಿಟಲಕೋಡಿ, ಜಯಂತ, ಸಂದೀಪ್ ಮೊದಲಾದವರು ಉಪಸ್ಥಿತರಿದ್ದರು.